ವಿಜಯಪುರ : ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವಿಗೀಡಾದ ಘಟನೆ ಮಂಗಳವಾರ ಜಿಲ್ಲೆಯ ತಿಕೋಟಾ ಬಳಿ ನಡೆದಿದೆ.
Advertisement
ತಿಕೋಟಾ-ವಿಜಯಪುರ ರಸ್ತೆ ಮಧ್ಯೆ ಕಾರು ಹಾಗೂ ಬೈಕ್ ಡಿಕ್ಕಿಯಾದ ಪರಿಣಾಮ ಅಲಿಯಾಬಾದ ಗ್ರಾಮದ ಸುರೇಶ ಮುದಕಪ್ಪ ಕನಾಳ (30) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಬಿಜ್ಜರಗಿ ಗ್ರಾಮದ ಭೀಮರಾಯ ಶಿವಪ್ಪ ಹಂಡಿಬಾರ (45) ವಿಜಯಪುರದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನಿಗಿದ್ದಾನೆ.
ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಶಶಿಕಲಾ ಲಂಗೋಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.