Advertisement

ಬೈಕಿಗೆ ಟಿಪ್ಪರ್ ಡಿಕ್ಕಿ : ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು

08:07 PM Feb 25, 2021 | Team Udayavani |

ರಾಣಿಬೆನ್ನೂರು : ಬೈಕ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ತಾಲೂಕಿನ ಇಟಗಿ ಗ್ರಾಮದ ಬಳಿ ಗುರುವಾರ ಸಂಭವಿಸಿದೆ.

Advertisement

ಮೃತರನ್ನು ತಾಲೂಕಿನ ಮುದೇನೂರ ಗ್ರಾಮದ ಸಿದ್ದಪ್ಪ ಹನುಮಂತಪ್ಪ ನಾಗೇನಹಳ್ಳಿ (45) ಪತ್ನಿ ಅನುಸೂಯಮ್ಮ (35) ಹಾಗೂ ಇಬ್ಬರು ಮಕ್ಕಳಾದ ವನೀತಾ (11) ಹಾಗೂ ಸುನಿತಾ (9) ಎಂದು ಗುರುತಿಸಲಾಗಿದೆ.

ಹಿರೇಕೇರೂರ ದುರ್ಗಾದೇವಿ ಜಾತ್ರೆಗೆ ಹೋಗಿ ತಮ್ಮ ಊರಿಗೆ ಮರಳುವಾಗ ಈ ದುರ್ಘಟನೆ ಸಂಭವಿಸಿದೆ. ಭೀಕರ ಅಪಘಾತದ ರಭಸಕ್ಕೆ ನಾಲ್ವರ ಮೃತ ದೇಹಗಳು ಛಿದ್ರ ಛಿದ್ರವಾಗಿವೆ, ಬೈಕ್ ನಜ್ಜುಗುಜ್ಜಾಗಿದೆ, ಘಟನಾಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಮತ್ತು ಸಂಭಂದಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಘಟನಾಸ್ಥಳದಲ್ಲಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಹಾಸ ಮಾಡಬೇಕಾಯಿತು.

ಇದನ್ನೂ ಓದಿ:ನಟಿ ಸನ್ನಿ ಪತಿ ಕಾರಿನ ಡುಬ್ಲಿಕೇಟ್ ನಂಬರ್ ಬಳಸಿ ಸಿಕ್ಕಿಬಿದ್ದ ಉದ್ಯಮಿ..!  

ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next