Advertisement

Kunigal: ಲಾರಿ ಕಾರು ನಡುವೆ ಭೀಕರ ಅಪಘಾತ: ಕಾರಿನಲ್ಲಿದ್ದ ತಾಯಿ ಮಗ ಮೃತ್ಯು, ಇಬ್ಬರಿಗೆ ಗಾಯ

10:19 AM Sep 16, 2023 | Team Udayavani |

ಕುಣಿಗಲ್ : ಲಾರಿ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡು ಕಾರು ನಜ್ಜುಗುಜ್ಜಾದ ಘಟನೆ ರಾಷ್ಟ್ರೀಯ ಹೆದ್ದಾರಿ 75 ತಾಲೂಕಿನ ಹೇರೂರು ಸೇತುವೆ ಬಳಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ನಾಗಮಂಗಲ ತಾಲೂಕು ಸೀಗೇಹಳ್ಳಿ ಗ್ರಾಮ ಹಾಲಿ ಬೆಂಗಳೂರು ಮಾದನಾಯಕಹಳ್ಳಿ ವಾಸಿ ಶೋಭ (35 ) ಆಕೆಯ ಮಗ ನಿಖಿಲ್ ಗೌಡ (12) ಮೃತ ದುರ್ದೈವಿಗಳು, ಕಾರಿನಲ್ಲಿದ್ದ ಪತಿ ಗಂಗೇಶ್ ಹಾಗೂ ಮಗಳು ಭುವನ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ವಿವರ ; ಗಂಗೇಶ್ ಹಾಗೂ ಆತನ ಪತ್ನಿ ಮಗ ಮಗಳು ಗೌರಿ ಗಣೇಶ ಹಬ್ಬಕ್ಕೆಂದು ಬೆಂಗಳೂರು ಮಾದನಾಯಕನಹಳ್ಳಿಯಿಂದ ಕಾರಿನಲ್ಲಿ ತಮ್ಮ ಸ್ವಗ್ರಾಮ ಸಿಗೇಹಳ್ಳಿ ಗ್ರಾಮಕ್ಕೆ ಹೊಗುತ್ತಿರಬೇಕಾದರೆ, ರಾಷ್ಟ್ರೀಯ ಹೆದ್ದಾರಿ 75 ಹೇರೂರು ಸೇತುವೆ ಬಳಿ ಬೆಂಗಳೂರಿನಿಂದ ಎಡಿಯೂರು ಕಡೆ ಚಲಿಸುತ್ತಿದ್ದ ಲಾರಿ ತಕ್ಷಣ ಬ್ರೇಕ್ ಹಾಕಿದ ಕಾರಣ ವೇಗವಾಗಿದ್ದ ಕಾರು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಗಂಗೇಶ್ ಅವರನ್ನು ಅದಿಚುಂಚನಗಿರಿ ಆಸ್ಪತ್ರೆ ಕರೆದ್ಯೋಯಲಾಗಿದೆ.

ಘಟನೆ ಸ್ಥಳಕ್ಕೆ ಸಿಪಿಐ ನವೀನ್ ಗೌಡ ಬೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Charmadi Ghat: ದಟ್ಟ ಮಂಜು: ಚಾರ್ಮಾಡಿ ಘಾಟ್ ನಲ್ಲಿ 100 ಅಡಿ ಪ್ರಪಾತಕ್ಕೆ ಉರುಳಿದ ಲಾರಿ…

Advertisement
Advertisement

Udayavani is now on Telegram. Click here to join our channel and stay updated with the latest news.

Next