Advertisement

ಹಳಿಯಾಳ – ದಾಂಡೇಲಿ ರಸ್ತೆಯಲ್ಲಿ ಪಲ್ಟಿಯಾದ ಟ್ರಕ್… ಚಾಲಕ ಪವಾಡ ಸದೃಶ ಪಾರು

05:39 PM Jul 05, 2023 | Team Udayavani |

ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಮರದ ತುಂಡು ಹೇರಿಕೊಂಡು ಬರುತ್ತಿದ್ದ ಟ್ರಕ್ಕೊಂದು ಹಳಿಯಾಳ-ದಾಂಡೇಲಿ ರಸ್ತೆಯ ಆಲೂರು ಎಂಬಲ್ಲಿ ಪಲ್ಟಿಯಾಗಿ ವಾಹನಕ್ಕೆ ಹಾನಿಯಾಗಿ, ಪವಾಡ ಸದೃಶ್ಯವಾಗಿ ಚಾಲಕ ಪಾರಾದ ಘಟನೆ ಇಂದು ಬುಧವಾರ ನಡೆದಿದೆ.

Advertisement

ಮರದ ತುಂಡು ತುಂಬಿಕೊಂಡು ಕಾಗದ ಕಾರ್ಖಾನೆಗೆ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಟ್ರಕ್ಕಿನಲ್ಲಿದ್ದ ಕಟ್ಟಿಗೆಗಳು ಚೆಲ್ಲಪಿಲ್ಲಿಯಾಗಿ ರಸ್ತೆ ತುಂಬಾ ಹರಡಿಕೊಂಡಿದ್ದು, ಇನ್ನೂ ವಾಹನವೂ ನಡುರಸ್ತೆಯಲ್ಲಿ ಪಲ್ಟಿಯಾದ ಹಿನ್ನಲೆಯಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ನಂತರ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ: ರಾಯಚೂರು: ಆಹಾರ ಅರಸಿ ಊರಿಗೆ ನುಗ್ಗಿದ ಮೊಸಳೆ… ಕಂಗಾಲಾದ ಗ್ರಾಮಸ್ಥರು

Advertisement

Udayavani is now on Telegram. Click here to join our channel and stay updated with the latest news.

Next