Advertisement

ಬನಹಟ್ಟಿ :  ಚಿಮ್ಮಡ ಬಳಿ ರಸ್ತೆ ಅಪಘಾತ ಯುವಕ ಸಾವು

07:35 PM Sep 10, 2021 | Team Udayavani |

ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ರಬಕವಿ ರಸ್ತೆಯ ಚಿಮ್ಮಡ ಹದ್ದಿಯ ಮುಘಳಖೋಡ ಬಳಿ ನಡೆದ ರಸ್ತೆ ಅಪಘಾತದಲ್ಲಿ ಯುವನೋರ್ವ ಸಾವನ್ನಪಿದ ಘಟನೆ ಬನಹಟ್ಟಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಬನಹಟ್ಟಿಯ ಸೋಮವಾರ ಪೇಟೆಯ ನಿವಾಸಿ ಬಾಳಯ್ಯ ಕಾಡಯ್ಯ ಕತ್ತಿ(27) ಮೃತ ದುರ್ದೈವಿ.

ಬಾಳಯ್ಯ ಅವರು ಗುರುವಾರ ರಾತ್ರಿ ತನ್ನ ಬೈಕನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಸಿಪಿಐ ಜೆ. ಕರಣೇಶಗೌಡ ಹಾಗೂ ಪಿಎಸ್‌ಐ ಸುರೇಶ ಮಂಟೂರ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ಮುಂಬೈನಲ್ಲಿ ಮಹಿಳೆ ಮೇಲೆ ಅತ್ಯಾಚಾರ| ಸಂತ್ರಸ್ಥೆ ಮೇಲೆ ಕ್ರೌರ್ಯ ಮೆರೆದ ಕೀಚಕರು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next