Advertisement

Bajpe:ತಡೆಗೋಡೆ ನಿರ್ಮಿಸದಿದ್ದರೆ ಸಂಪರ್ಕ ಕಡಿತದ ಭೀತಿ!

03:22 PM May 19, 2023 | Team Udayavani |

ಬಜಪೆ: ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ರಾಜ್ಯ ಹೆದ್ದಾರಿ 67ರಲ್ಲಿ ಪೊರ್ಕೋಡಿ ದ್ವಾರದ ಬಳಿ ಸುಮಾರು 2.75 ಕೋಟಿ ರೂಪಾಯಿ ಅನುದಾನದಲ್ಲಿ ತಡೆಗೋಡೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆ ಯು ತ್ತಿದೆ. ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣ ಗೊಂಡಿದೆ. ಆದರೆ ತಡೆಗೋಡೆ ನಿರ್ಮಾಣವಾಗಿಲ್ಲ. ಮಳೆ ಬಂದಲ್ಲಿ ಮಣ್ಣು ಹಾಕಿ ತುಂಬಿಸಿದ ರಸ್ತೆ ಅಭಿವೃದ್ಧಿ ಕಾಮಗಾರಿ ಕೊಚ್ಚಿ ಹೋಗುವ ಸಾಧ್ಯತೆ ಇದೆ. ಇದರಿಂದ ಮಂಗಳೂರು -ಬಜಪೆ ರಸ್ತೆ ಸಂಪರ್ಕವೂ ಕಡಿತವಾಗುವ ಭೀತಿ ಎದುರಾಗಿದೆ.

Advertisement

ರಾಜ್ಯ ಹೆದ್ದಾರಿ 67 ಕಳೆಗಡೆ ಪೊರ್ಕೋಡಿಗೆ ಹೋಗುವ ರಸ್ತೆಗೆ ಇಲ್ಲಿನ ತುಂಬಿಸಿದ ಮಣ್ಣು ಹೋಗಿ ಆ ರಸ್ತೆಯಲ್ಲಿಯೂ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ. ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೆಂಜಾರಿನಿಂದ ಪೊರ್ಕೋಡಿ ದ್ವಾರದ ಬಳಿಯ ತನಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಅದರಲ್ಲಿ ತಿರುವಿನಿಂದ ಕೂಡಿದ ಕಿರಿದಾದ ರಸ್ತೆ ವಿಸ್ತ ರಣೆ ಕಾಮಗಾರಿ ಉಳಿದಿತ್ತು. ಈ ಕಾಮಗಾರಿಯನ್ನು ಮಾರ್ಚ್‌ನಲ್ಲಿ ಆರಂಭಿಸಲಾಗಿತ್ತು.

ಪೊರ್ಕೋಡಿ ದ್ವಾರದ ಸಮೀಪ ರಾಜ್ಯ ಹೆದ್ದಾರಿ 67ರಲ್ಲಿ ಈ ತಿರುವು ಹೊಂದಿರುವುದಲ್ಲದೆ ಕಿರಿದಾಗಿದ್ದು ಅಪಾಯ, ಅಪಘಾತಗಳು ಸಂಭವಿಸುತ್ತಿತ್ತು. ಇಲ್ಲಿ ರಸ್ತೆ ವಿಸ್ತರಣೆ ಅಗತ್ಯವಿತ್ತು.

ಸಣ್ಣ ಮಳೆಗೆ ರಸ್ತೆ ಬದಿ ಕೊರೆತ
ಮಣ್ಣು ತುಂಬಿಸಿ ರಸ್ತೆ ವಿಸ್ತ ರಣೆ ಹಾಗೂ ತಿರುವನ್ನು ತೆಗೆದು ನೇರ ಮಾಡಿ, ರಸ್ತೆ ಡಾಮರು ಕಾಮಗಾರಿಗಳು ನಡೆದಿವೆ. ತುಂಬಿಸಿದ ಮಣ್ಣಿಗೆ ತಡೆಗೋಡೆ ಅಗತ್ಯವಾಗಿದೆ. ಅ ಕಾಮಗಾರಿ ನಡೆದಿಲ್ಲ. ಮೊನ್ನೆಯ ಸಣ್ಣ ಮಳೆಗೆ ರಸ್ತೆಯ ಬದಿಯಲ್ಲಿ ಹಾಕಲಾದ ಮಣ್ಣು ಕೊರೆದು ಹೋಗಿದೆ. ಇಲ್ಲಿ ಚರಂಡಿಯೂ ಇಲ್ಲ. ಇದರಿಂದಾಗಿ ತುರ್ತಾಗಿ ತಡೆಗೋಡೆ ನಿರ್ಮಾಣ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ತುಂಬಿಸಿದ ಮಣ್ಣು ಕುಸಿದು ಪೊರ್ಕೋಡಿಗೆ ಹೋಗುವ ರಸ್ತೆಗೆ ಬೀಳಲಿದೆ. ಇದ ರಿಂದ ರಾಜ್ಯ ಹೆದ್ದಾರಿ 67 ಸಂಪರ್ಕ ಕಡಿತವೂ ಆಗುವ ಸಂಭವ ಇದೆ. ಈ ರಸ್ತೆ ವಿಸ್ತ ರಣೆ ಹಾಗೂ ತಿರುವು ತೆಗೆದು ನೇರ ಮಾಡಿದ ಕಾಮಗಾರಿಗೆ ಜನರು ಪ್ರಶಂಶಿಸಿದ್ದಾರೆ. ಆದರೆ ಮಳೆ ಬರುವ ಮುನ್ನ ತಡೆಗೋಡೆ ಶೀಘ್ರ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತವಾಗಿದೆ.

- ಸುಬ್ರಾಯ ನಾಯಕ್‌ ಎಕ್ಕಾರು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next