Advertisement

ರಸ್ತೆಗೆ ಬಿದ್ದ ಮರ: ಬಸ್‌ ಸಂಚಾರಕ್ಕೆ ಅಡ್ಡಿ

07:23 PM Jul 09, 2020 | Sriram |

ಕುಂದಾಪುರ: ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಆ ಮಾರ್ಗದಲ್ಲಿ ಬಸ್‌ ಸಂಚಾರಕ್ಕೆ ಅಡ್ಡಿಯಾಗಿದ್ದು, ಬಸ್‌ ಅರ್ಧದಲ್ಲೇ ಪ್ರಯಾಣಿಕರನ್ನು ಇಳಿಸಿ ವಾಪಸ್‌ ತೆರಳಿದ ಕಾರಣ ಇಬ್ಬರು ಶಿಕ್ಷಕಿಯರ ಸಹಿತ ಪ್ರಯಾಣಿಕರು 4-5 ಕಿ.ಮೀ. ನಡೆದೇ ಸಾಗಿದ ಘಟನೆ ಹಳ್ಳಿಹೊಳೆ ಗ್ರಾಮದಲ್ಲಿ ಗುರುವಾರ ನಡೆದಿದೆ.

Advertisement

ಕುಂದಾಪುರದಿಂದ ಬೆಳಗ್ಗೆ 8.35ಕ್ಕೆ ಹೊರಡುವ ಖಾಸಗಿ ಬಸ್‌ ಸಿದ್ದಾಪುರ ಮಾರ್ಗವಾಗಿ ಕಮಲಶಿಲೆ, ಹಳ್ಳಿಹೊಳೆ, ಮುದೂರು, ಜಡ್ಕಲ್‌ನಿಂದ ಹೆಮ್ಮಾಡಿ ಮಾರ್ಗವಾಗಿ ಮತ್ತೆ ಕುಂದಾಪುರಕ್ಕೆ ತೆರಳುತ್ತದೆ.

ಆದರೆ ಗುರುವಾರ ಹಳ್ಳಿಹೊಳೆ ಗ್ರಾಮದ ತೆಂಕಣಮಕ್ಕಿಗಿಂತ ಸ್ವಲ್ಪ ಮುಂದೆ ಮರ ಬಿದ್ದಿದ್ದು, ಇದರಿಂದ ಬಸ್‌ ಅಲ್ಲಿಂದಲೇ ವಾಪಾಸು ಹಿಂದಿರುಗಿ ಬಂದಿದೆ.

ಆ ಬಸ್‌ನಲ್ಲಿದ್ದ ಕಾರಿಬೈಲು ಹಾಗೂ ಇರಿಗೆ ಸರಕಾರಿ ಶಾಲೆಯ ಶಿಕ್ಷಕಿಯರು, ಕೆಲ ಪ್ರಯಾಣಿಕರು 4-5 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿ, ಶಾಲೆಗೆ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next