Advertisement

ಬೃಹತ್‌ ಬಂಡೆ ಇಟ್ಟು ರಸ್ತೆ ಬಂದ್‌

06:31 AM May 13, 2020 | Suhan S |

ಕೊಟ್ಟಿಗೆಹಾರ: ಚಿಕ್ಕಮಗಳೂರಿನ ನೆರೆ ಜಿಲ್ಲೆಗಳಾದ ಹಾಸನ, ಶಿವಮೊಗ್ಗ ಕೋವಿಡ್ ಪ್ರಕರಣ ದಾಖಲು ಆಗಿರುವುದರಿಂದ ಭಯಭೀತರಾಗಿರುವ ಗ್ರಾಮಸ್ಥರು ದೇವಾಲಕೆರೆ ಮತ್ತು ದೇವವೃಂದ ಗ್ರಾಮದ ಮಧ್ಯೆ ಜಪವತಿ ಸೇತುವೆ ಸಮೀಪ ರಸ್ತೆಗೆ ಬಂಡೆಯನ್ನು ಅಡ್ಡ ಇಟ್ಟು ರಸ್ತೆ ಬಂದ್‌ ಮಾಡಿದ್ದಾರೆ.

Advertisement

ಈ ರಸ್ತೆಯೂ ಸಕಲೇಶಪುರ, ಹಾನು  ಬಾಳು, ದೇವಲಕೆರೆ, ದೇವವೃಂದ ಮಾರ್ಗವಾಗಿ ಚಿಕ್ಕಮಗಳೂರು ಜಿಲ್ಲೆಯನ್ನು ಪ್ರವೇಶಿಸುತ್ತದೆ. ಹಾಸನ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದೃಡಪಟ್ಟಿರುವ ಹಿನ್ನಲೆಯಲ್ಲಿ ಭಯ ಬೀತರಾದ ಗ್ರಾಮಸ್ಥರು ರಸ್ತೆಗೆ ಬಂಡೆ ಇಟ್ಟು ರಸ್ತೆ ಬಂದ್‌ ಮಾಡಿದ್ದಾರೆ. ಗೋಣಿಬೀಡು ಪೊಲೀಸರ ಸಮ್ಮುಖದಲ್ಲೆ ಗ್ರಾಮಸ್ಥರು ಬೃಹತಾಕಾರದ ಬಂಡೆಗಳನ್ನು ಇಟ್ಟು ರಸ್ತೆ ಬಂದ್‌ ಮಾಡಿದ್ದು ಅಂಬುಲೆನ್ಸ್‌ ಸೇರಿದಂತೆ ತುರ್ತು ವಾಹನಗಳು ಈ ಮಾರ್ಗವಾಗಿ ಬಂದರೆ ತೊಂದರೆ ಆಗುವ ಸಾದ್ಯತೆ ಇದ್ದು ಈ ರಸ್ತೆಯನ್ನು ಬಂದ್‌ ಮಾಡುವ ಬದಲು ಪೊಲೀಸ್‌ ಚೆಕ್‌ ಪೋಸ್ಟ್‌ ನಿರ್ಮಿಸುವುದು ಸೂಕ್ತ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next