Advertisement

ಕೇರಳದಲ್ಲಿ ರಸ್ತೆ ಅಪಘಾತ: ಚಿತ್ರದುರ್ಗದ ಇಬ್ಬರು ಜೆಡಿಎಸ್ ಮುಖಂಡರ ದುರ್ಮರಣ

09:15 AM Jan 16, 2020 | Mithun PG |

ಚಿತ್ರದುರ್ಗ: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಚಿತ್ರದುರ್ಗದ ಇಬ್ಬರು ದುರ್ಮರಣಕ್ಕೀಡಾದ ಘಟನೆ ಕೇರಳದಲ್ಲಿ ಮಲಪುರಂ ಬಳಿ ನಡೆದಿದೆ.

Advertisement

ಕಾರಿನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು , ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರನ್ನು ಪಾಂಡುರಂಗ (35)  ಮತ್ತು ಪ್ರಭಾಕರ್ (52)  ಎಂದು ಗುರುತಿಸಲಾಗಿದೆ. ಇವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣ ಮೂಲದವರು.

ಪಾಂಡುರಂಗ ಹಿರಿಯೂರು ನಗರಸಭೆ 7ನೇ ವಾರ್ಡನ ಜೆಡಿಎಸ್ ಸದಸ್ಯರಾಗಿದ್ದರು, ಪ್ರಭಾಕರ್  ಜೆಡಿಎಸ್ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಒಟ್ಟು ನಾಲ್ವರು ಪ್ರವಾಸಕ್ಕೆಂದು  ತೆರಳಿ ವಾಪಾಸಾಗುವ ವೇಳೆ ಕಾರು ಮತ್ತು ಲಾರಿಯ ನಡುವೆ ಢಿಕ್ಕಿ ಸಂಭವಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next