Advertisement

ರಸ್ತೆ ಅಪಘಾತ: 7 ಮಂದಿ ದುರ್ಮರಣ

07:00 AM May 22, 2018 | |

ಶಿರಾ(ತುಮಕೂರು): ಬಸ್‌ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಜನ ಮೃತಪಟ್ಟು, ಇಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾನುವಾರ ರಾತ್ರಿ ನಡೆದಿದೆ.

Advertisement

ಮೃತರನ್ನು ಅನುಷಾ(7), ಸವಿತಾ(21), ರತ್ನಮ್ಮ(38) , ಸುಮಲತಾ(21), ಗಿರಿಜಮ್ಮ ಪಟ್ಟನಾಯಕನಹಳ್ಳಿಗೆ ಸೇರಿದವರಾಗಿದ್ದಾರೆ. ಶಂಕರ(35), ಅಶ್ವತ್ಥನಾರಾಯಣ (40) ಇಲ್ಲಿನ ಜ್ಯೋತಿನಗರ ವಾಸಿಗಳು ಎಂದು ಗುರುತಿಸಲಾಗಿದೆ.

ತಾಲೂಕಿನ ವಿವಿಧ ಭಾಗಗಳಿಂದ ಸಿಗಂದೂರು ಪ್ರವಾಸಕ್ಕೆಂದು ಖಾಸಗಿ ಬಸ್‌ನಲ್ಲಿ ತೆರಳಿದ್ದ ಸುಮಾರು 55 ಜನರಿದ್ದ ತಂಡ ಪ್ರವಾಸ ಮುಗಿಸಿ ಇನ್ನೇನು ಶಿರಾ ತಲುಪುವ ವೇಳೆ ಅಪಘಾತ ಸಂಭವಿಸಿದೆ. ಶನಿವಾರ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ತೆರಳಿದ್ದ ತಂಡ ವಾಪಸ್‌ ಬರುವಾಗ ಶಿರಾ ಹೊರವಲಯದ ಡಾಬಾ ಒಂದರ ಬಳಿ ನಿಲ್ಲಿಸಿದ್ದ ಮೆಕ್ಕೆಜೋಳ ತುಂಬಿದ್ದ ಲಾರಿಯೊಂದಕ್ಕೆ ದುರ್ದೈವಿಗಳಿದ್ದ ಬಸ್‌ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಘಟನೆ ನಂತರ ಬಸ್‌ ಚಾಲಕ ನಾಪತ್ತೆಯಾಗಿದ್ದಾನೆ. ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಇಂಡಿಕೇಟರ್‌ ಹಾಕದೇ ಇದ್ದದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next