Advertisement

ಆರ್‌ಜೆಡಿ ಜಿಲ್ಲಾ ಪ್ರ.ಕಾರ್ಯದರ್ಶಿಯ ತಲೆಕಡಿದು ಕೊಲೆ

04:34 PM Jul 10, 2018 | udayavani editorial |

ಪಟ್ನಾ : ಆರ್‌ಜೆಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ಪಾಸ್ವಾನ್‌ ಅವರನ್ನು ಅಪರಿಚಿತ ದುಷ್ಕರ್ಮಿಗಳು ಅಪಹರಿಸಿ ಬಿಹಾರದ ನವಾಡಾ ಪ್ರದೇಶದಲ್ಲಿ  ತಲೆ ಕಡಿದು ಅಮಾನುಷವಾಗಿ ಕೊಂದಿರುವುದಾಗಿ ಪ್ರಭಾತ ಖಬರ್‌ ವರದಿ ಮಾಡಿದೆ. 

Advertisement

ನಲಂದಾ ಜಿಲ್ಲೆಯ ಖುದಾಗಂಜ್‌ ಪ್ರದೇಶದಲ್ಲಿನ ಪೈಮಾರ್‌ ನದಿಯ ಸೇತುವೆಯಡಿ ತಲೆ ಕಡಿಯಲ್ಪಟ್ಟ ಶವ ಪೊಲೀಸರಿಗೆ ಸಿಕ್ಕಿದೆ.

ಪಾಸ್ವಾನ್‌ ಸಂಬಂಧಿಕರು ಹೇಳಿರುವ ಪ್ರಕಾರ ಜು.6ರಂದು ಬುಚ್ಚಿ ಗ್ರಾಮದ ಛೋಟೂ ಗುಪ್ತಾ ಎಂಬಾತ ಪಾಸ್ವಾನ್‌ ಅವರನ್ನು ಪಂಚಾಯತ್‌ ಸಭೆಗೆಂದು ಕರೆದುಕೊಂಡು ಹೋಗಿದ್ದ. ಆ ಬಳಿಕ ಪಾಸ್ವಾನ್‌ ಮನೆಗೆ ಮರಳಿ ಬಂದಿಲ್ಲ ಎಂದು ಗೊತ್ತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next