Advertisement

ನದಿ ಜೋಡಣೆ ಜೀವವೈವಿಧ್ಯತೆಗೆ ಮಾರಕ

08:13 PM Jul 14, 2021 | Team Udayavani |

 

Advertisement

 

ಸರಕಾರ ಈ ಯೋಜನೆ ಕೈಬಿಡಲಿ- ಸ್ವರ್ಣವಲ್ಲಿ ಶ್ರೀ­! ಜೀವ ವೈವಿಧ್ಯ ಜಾಗೃತಿ ಅಭಿಯಾನ ಉದ್ಘಾಟನೆ

ಸಿದ್ದಾಪುರ: ನದಿ ತಿರುವು ಯೋಜನೆಯನ್ನು ಸರಕಾರ ನದಿ ಜೋಡಣೆ ಯೋಜನೆ ಎಂದು ಹೇಳುತ್ತಿದೆ. ಶಬ್ಧಗಳ ಬದಲಾವಣೆ ಮೂಲಕ ಜನರಲ್ಲಿಯ ಭಾವನೆಯನ್ನು ತಣ್ಣಗಾಗಿಸುವ ಪ್ರಯತ್ನ ಜೀವ ವೈವಿಧ್ಯತೆಗೆ ಮಾರಕವಾಗಿ ಪರಿಣಮಿಸುತ್ತದೆ. ಸರಕಾರ ನದಿ ಜೋಡಣೆ ಯೋಜನೆ ಕೈಬಿಡಬೇಕು ಎಂದು ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಹೇಳಿದರು.

ಅವರು ತಾಲೂಕಿನ ಹೇರೂರಿನಲ್ಲಿ ರಾಜ್ಯ ಜೀವವೈವಿಧ್ಯ ಮಂಡಳಿ, ಶಿರಸಿ ಅರಣ್ಯ ಇಲಾಖೆ ವಿಭಾಗ, ಜಿಪಂ ಹಾಗೂ ತಾಪಂ ಮತ್ತು ಅಣಲೇಬೈಲ್‌ ಗ್ರಾಪಂ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಜೀವ ವೈವಿಧ್ಯ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ನದಿ ಜೋಡಣೆಯಿಂದ ತೊಂದರೆ ಆಗುತ್ತಿರುವುದು ಎತ್ತಿನಹೊಳೆ ಯೋಜನೆ ಪ್ರತ್ಯಕ್ಷ ನಿದರ್ಶನ. ಮನುಷ್ಯನಿಂದ ಅನೇಕ ಜೀವಿಗಳಿಗೆ ತೊಂದರೆಯಾಗುತ್ತಿದ್ದು, ಅವುಗಳ ವಿನಾಶಕ್ಕೆ ಕಾರಣನಾಗಿದ್ದಾನೆ. ಮನುಷ್ಯನ ಜೀವನ ಕ್ರಮವೇ ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ಈ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಜೀವ ವೈವಿಧ್ಯತೆಯ ದಾಖಲೆಯನ್ನು ಸರಕಾರಕ್ಕೆ ಸಲ್ಲಿಸಬೇಕು. ಪ್ರತಿಯೊಂದು ಗ್ರಾಪಂಗಳಲ್ಲಿಯೂ ಸಮಿತಿ ಈ ಕುರಿತ ಕಾರ್ಯಕ್ಕೆ ಮುಂದಾಗಬೇಕು. ದೇವರ ಕಾಡುಗಳ ರಕ್ಷಣೆಯಾಗಬೇಕು. ಮನುಷ್ಯ ಎಷ್ಟು ಅಸಹಾಯಕ ಎನ್ನುವುದನ್ನು ಕೊರೊನಾ ತೋರಿಸಿಕೊಟ್ಟಿದೆ. ನಾವು ಪರಿಸರದ ಸಂರಕ್ಷಣೆ ಮಾಡಿ ಸಮತೋಲನ ಕಾಪಾಡಿಕೊಳ್ಳಬೇಕಾಗಿದೆ ಎಂದರು. ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಮುಂದಿನ ದಿನಗಳಲ್ಲಿ ಜೀವ ವೈವಿಧ್ಯತೆಯ ದಾಖಲಾತಿ ಕುರಿತಾಗಿ ಮತ್ತು ಸಂರಕ್ಷಣೆಗಾಗಿ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಕತ್ತಲೆ ಕಾನು ಮಾನ್ಯತೆ ಕಾಪಾಡಲು ಯೋಜನೆ ರೂಪಿಸಲಾಗಿದೆ ಎಂದರು.

ಪರಿಸರ ತಜ್ಞ ಬಾಲಚಂದ್ರ ಹೆಗಡೆ ಸಾಯಿಮನೆ ಹಾಗೂ ಕೊಳಲು ತಯಾರಕ ಮತ್ತು ಬಿದಿರು ಸಂರಕ್ಷಕ ಮಂಜುನಾಥ ಹೆಗಡೆ ನಟ್ಟಿಗಾರ ಅವರನ್ನು ಸನ್ಮಾನಿಸಲಾಯಿತು. ಡಿಎಫ್‌ಒ ಎಸ್‌.ಜಿ. ಹೆಗಡೆ, ತಹಶೀಲ್ದಾರ್‌ ಪ್ರಸಾದ ಎಸ್‌.ಎ, ತಾಪಂ ಇಒ ಪ್ರಶಾಂತ ರಾವ್‌, ಗ್ರಾಪಂ ಅಧ್ಯಕ್ಷೆ ಮಂಗಲಾ ಸುಧಾಕರ ಹೆಗಡೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next