Advertisement

ʼಕಾಂತಾರʼ ಟ್ರೇಲರ್‌ ರಿಲೀಸ್‌ : ಇದು ಪ್ರಕೃತಿ ಮತ್ತು ಆಚರಣೆ ಸುತ್ತ ಸಾಗುವ ಸಂಘರ್ಷ

12:05 PM Sep 05, 2022 | Team Udayavani |

ಬೆಂಗಳೂರು: ರಿಷಭ್‌ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್‌ ಕಾಂಬಿನೇಷನ್‌ ನಲ್ಲಿ ಮೂಡಿ ಬರುತ್ತಿರುವ ʼಕಾಂತಾರʼ ಚಿತ್ರದ ಅಧಿಕೃತ ಟ್ರೇಲರ್‌ ಸೋಮವಾರ (ಸೆ.05)ಬಿಡುಗಡೆಯಾಗಿದೆ.

Advertisement

ರಿಷಭ್‌ ಶೆಟ್ಟಿ ನಿರ್ದೇಶನ ಮಾಡಿ, ನಟಿಸುತ್ತಿರುವ ʼಕಾಂತಾರʼ ಅನೌನ್ಸ್‌ ಆದ ದಿನದಿಂದ ನಿರೀಕ್ಷೆಗಳು ಹೆಚ್ಚಾಗಿತ್ತು. ಪೋಸ್ಟರ್‌ , ಟೀಸರ್‌ ಹಾಗೂ ಹಾಡುಗಳಿಂದ ನಿರೀಕ್ಷೆ ದುಪ್ಪಟ್ಟು ಆಗಿದ್ದು, ಚಿತ್ರವನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

ಇತ್ತೀಚೆಗೆ ಸಿನಿಮಾದ ʼಸಿಂಗಾರ ಸಿರಿಯೆʼ ಹಾಡು ಜನಮನದಲ್ಲಿ ಸದ್ದು ಮಾಡಿದೆ. ವಿಜಯ್‌ ಪ್ರಕಾಶ್‌, ಅನನ್ಯಾ ಭಟ್‌ ಹಾಡಿಗೆ ಧ್ವನಿಯಾಗಿದ್ದು, ʼಶಿವ – ಲೀಲಾʼರ ಪ್ರೇಮಕಥೆ ನೋಡಲು ಚೆಂದವಾಗಿ ಮೂಡಿಬಂದಿದೆ.

ಸಿನಿಮಾದ ಅಧಿಕೃತ ಟ್ರೇಲರ್‌ ರಿಲೀಸ್‌ ಮಾಡಿ ಸಿನಿ ರಸಿಕರ ಕುತೂಹಲವನ್ನು ಹೆಚ್ಚಿಸಿದೆ. ಕರಾವಳಿಯ ಕಂಬಳ ಕ್ರೀಡೆ,ಆಚರಣೆ ,ಆಚಾರ – ವಿಚಾರಗಳನ್ನು ಟ್ರೇಲರ್‌ ನಲ್ಲಿ ಸೂಕ್ಷ್ಮವಾಗಿ ತೋರಿಸಲಾಗಿದೆ.

ಭೂತ ಕೋಲ, ಕಂಬಳ ಮುಂತಾದ ಕರಾವಳಿಯ ಆಚರಣೆಗಳು, ಕಾಡಿನ ಸಂಗಡ ಬದುಕುತ್ತಿರುವ ಜನರ ದಿನಚರಿಯೊಂದಿಗೆ ಸರ್ಕಾರದ ಆದೇಶ ಕಾಯುವ ಅಧಿಕಾರಿಗಳ ಸಂಘರ್ಷ ಇಲ್ಲಿ ಚಿತ್ರಿತವಾಗಿದೆ. ಫಾರೆಸ್ಟ್‌ ಆಫೀಸರ್‌ ಆಗಿ ಕಿಶೋರ್‌ ಇಲ್ಲಿ ಪ್ರಕೃತಿಯನ್ನು ರಕ್ಷಿಸಲು ಮುಂದಾದರೆ, ತನ್ನ ಆಚರಣೆ ಮತ್ತು ಸಂಪ್ರದಾಯವನ್ನು ಉಳಿಸುವತ್ತ ರಿಷಭ್‌ ಇಲ್ಲಿ ಪಣತೊಟ್ಟು ಹೋರಾಟ ಮಾಡುವುದನ್ನು ತೋರಿಸಲಾಗಿದೆ.

Advertisement

ಅರವಿಂದ್‌ ಎಸ್. ಕಶ್ಯಪ್‌ ಅವರ ಛಾಯಗ್ರಹಣ, ಅಜನೀಶ್‌ ಲೋಕನಾಥ್ ಮ್ಯೂಸಿಕ್‌ ಕಣ್ಣಿಗೆ ಹಿತ, ಮನಸ್ಸಿಗೆ ಖುಷಿ ನೀಡುವುದರೊಂದಿಗೆ ಕುತೂಹಲವಾಗಿ ಮೂಡಿಬಂದಿದೆ.ರಿಷಭ್‌ ಶೆಟ್ಟಿ, ಸಪ್ತಮಿ ಗೌಡ, ಪ್ರಮೋದ್‌ ಶೆಟ್ಟಿ, ಕಿಶೋರ್‌, ಅಚ್ಯುತ್‌ ಕುಮಾರ್‌ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.ಹೊಂಬಾಳೆ ಫಿಲ್ಮ್ಸ್‌ ಮೂಲಕ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಾಣ ಮಾಡಿದ್ದು, ಇದೇ ಸೆ.30 ರಂದು ಸಿನಿಮಾ ತೆರೆಗೆ ಬರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next