Advertisement

ಸಮಾಜಮುಖೀ ಚಿಂತನೆಯಿಂದ ಸಂಘಟನೆಗೆ ಬಲ: ಜಗನ್ನಾಥ ಗೌಡ

02:38 AM Jun 17, 2019 | Team Udayavani |

ಬೆಳ್ತಂಗಡಿ: ಸಂಘಟನೆಗಳು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಸಮಾಜಮುಖೀ ಚಿಂತನೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಗನ್ನಾಥ ಗೌಡ ಅಡ್ಕಾಡಿ ತಿಳಿಸಿದರು.

Advertisement

ಬೆಳ್ತಂಗಡಿ ತಾಲೂಕು ಶ್ರೀ ಕಾಲ ಭೈರವೇಶ್ವರ ಒಕ್ಕಲಿಗ ಗೌಡರ ಸಂಘ ಹಾಗೂ ಕೆ.ಎಂ.ಸಿ. ಆಸ್ಪತ್ರೆ ಸಹಯೋಗದಲ್ಲಿ ಉಜಿರೆ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ ಸಹಕಾರಿ ಸಂಘದ ವಠಾರದಲ್ಲಿ ರವಿವಾರ ಜರ ಗಿದ ರಕ್ತದಾನ ಶಿಬಿರವನ್ನು ಅವರು ಉದ್ಘಾಟಿಸಿ, ಸ್ವಜಾತಿ ಬಾಂಧವರು ಅನೇಕ ಸ್ತರಗಳಲ್ಲಿ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸಂಘದಿಂದ ಮತ್ತೂಂದು ಹೆಜ್ಜೆಯಾಗಿ ರಕ್ತದಾನ ಶಿಬಿರ ಹಮ್ಮಿಕೊಂಡು, ಸಮಾಜದ ಜನರ ಆರೋಗ್ಯ ಕಾಪಾಡುವಲ್ಲಿನ ಕಾಳಜಿ ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘದ ತಾಲೂಕು ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಮಾತನಾಡಿ, ಸಂಪತ್ತಿಗಿಂತ ಆರೋಗ್ಯ ಮಿಗಿಲು ಎಂಬುದನ್ನು ಅರಿತು ರಕ್ತದಾನ ವನ್ನು ಸಂಘಟನೆ ಹಮ್ಮಿಕೊಂಡಿದೆ ಎಂದರು.

ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಯುವ ವೇದಿಕೆ ಅಧ್ಯಕ್ಷ ಸುಧಾಕರ ಗೌಡ ಪ್ರಸ್ತಾವಿಸಿದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಡಾ| ದಿಶಾ ರಕ್ತದಾನ ಶಿಬಿರದ ಮಹತ್ವನ್ನು ತಿಳಿಸಿದರು.

ಶ್ರೀ ಕಾಲಭೈರವೇಶ್ವರ ಒಕ್ಕಲಿಗರ ಕ್ರೆಡಿಟ್ ಸೌಹಾರ್ದ ಸಹಕಾರಿ ಉಜಿರೆ, ಶ್ರೀ ಕಾಲಭೈರವೇಶ್ವರ ಗೌಡರ ಯುವ ವೇದಿಕೆ ಹಾಗೂ ಕೆ.ಎಂ.ಸಿ. ಮಂಗಳೂರು, ಸಾರ್ವ ಜನಿಕರ ಸಹಕಾರದಿಂದ ಶಿಬಿರದಲ್ಲಿ 123 ಯುನಿಟ್ ರಕ್ತ ಸಂಗ್ರಹಿಸಲಾಯಿತು.

Advertisement

ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ಶ್ರೀ ಕಾಲಭೈರವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್‌ ಜಿ. ಗೌಡ, ಶ್ರೀ ಕಾಲಭೆೈರವೇಶ್ವರ ಒಕ್ಕಲಿಗ ಗೌಡ ಸಂಘದ ಕಾರ್ಯಾಧ್ಯಕ್ಷ ತುಂಗಪ್ಪ ಗೌಡ ಮರಕ್ಕಡ, ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಗೌಡ ಇಚ್ಚಿಲ, ಉದ್ಯಮಿ ಶಿವಕಾಂತ ಗೌಡ, ಬೆಳ್ತಂಗಡಿ ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಗೌಡ, ಸಂಘದ ಉಪಾಧ್ಯಕ್ಷ ಸುಂದರ ಗೌಡ ಪುಡ್ಕೆತ್ತು, ಯುವ ಒಕ್ಕಲಿಗರ ಸಂಘ ರಾಜ್ಯ ಕಾರ್ಯದರ್ಶಿ ದೇವಿಪ್ರಸಾದ್‌ ಬೊಳ್ಮ ಮತ್ತಿತರರಿದ್ದರು.

ಬಾಲಕೃಷ್ಣ ಗೌಡ ಕಲ್ಲಾಜೆ ಸ್ವಾಗತಿಸಿ, ದಿನೇಶ್‌ ಗೌಡ ಕಲ್ಲಾಜೆ ವಂದಿಸಿದರು. ಅನಿಲ್ ಗೌಡ ಅಂತರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next