Advertisement

ಬೇಳೂರು: ಮರಳು ಅಡ್ಡೆಗೆ ದಾಳಿ

11:18 AM Dec 21, 2018 | |

ತೆಕ್ಕಟ್ಟೆ: ಬೇಳೂರು ಗ್ರಾಮದ ದೇಲಟ್ಟು ತೆಂಕಬೆಟ್ಟಿನ ಹಿರೇಹೊಳೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಕಂದಾಯ ಇಲಾಖೆ ಮತ್ತು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಕೋಟ ಪೊಲೀಸರ ಜತೆಗೆ ಡಿ.20ರಂದು ಮುಂಜಾನೆ ದಾಳಿ ನಡೆಸಿದ್ದು, ಅಲ್ಲಿಂದ ಟೆಂಪೋ, ಮಾರುತಿ ಆಲ್ಟೋ ಕಾರು, ದೋಣಿ ಸಹಿತ ಮರಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಹಲವು ತಿಂಗಳುಗಳಿಂದಲೂ ಬೇಳೂರು ಗ್ರಾಮದ ಸುತ್ತಮುತ್ತಲಿನ ಹೊಳೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಹಲವು ಬಾರಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡುತ್ತಿದ್ದರು. ದಾಳಿಯಲ್ಲಿ ಗ್ರಾಮಲೆಕ್ಕಿಗ ಪ್ರಕಾಶ್‌, ಕೋಟ  ಎಎಸ್‌ಐ ಆನಂದ ವೆಂಕಟ, ಸಿಬಂದಿ ಸುರೇಶ್‌ ಹೆಮ್ಮಾಡಿ ಸಹಿತ ವಿವಿಧ ಇಲಾಖಾ ಅಧಿಕಾರಿಗಳು  ಪಾಲ್ಗೊಂಡರು.

ವರದಿಗಾರಿಕೆಗೆ ಅಡ್ಡಿ
ದೇಲಟ್ಟು ತೆಂಕಬೆಟ್ಟು ಹಿರೇಹೊಳೆ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ಗುರುವಾರ ದಾಳಿ ನಡೆದಾಗ ವರದಿಗಾಗಿ ತೆಳಿದ್ದ ಸ್ಥಳೀಯ ಪತ್ರಕರ್ತರಿಗೆ ಅಡ್ಡಿಪಡಿಸಿದ ದಂಧೆಕೋರರು ಫೋಟೋ ತೆಗೆಯದಂತೆ  ತಡೆಯೊಡ್ಡಲು ಪ್ರಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರ ಮುಂದೆಯೇ ಮಾಧ್ಯಮದವರ ಮೇಲೆ ದಂಧೆಕೋರರು ಹರಿಹಾಯ್ದಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next