Advertisement

ತಾಪಂ ಎದುರು ನಿವೃತ್ತ ಗ್ರಾಪಂ ಸಿಬ್ಬಂದಿ ಸತ್ಯಾಗ್ರಹ

11:17 AM May 28, 2022 | Team Udayavani |

ಅಫಜಲಪುರ: ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ನಿವೃತ್ತಿಯಾದರೂ ವೇತನ ಪಾವತಿ ಮಾಡಿಲ್ಲವೆಂದು ತಾಪಂ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

Advertisement

ನಿವೃತ್ತ ನೌಕರರು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ ಸಹಕಾರದೊಂದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಸತ್ಯಾಗ್ರಹ ಉದ್ದೇಶಿಸಿ ಕಾರ್ಮಿಕ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ, ಗ್ರಾ.ಪಂ ನೌಕರರು ಕರ್ತವ್ಯದಲ್ಲಿದ್ದಾಗ ಕೆಲಸ ಮಾಡಿಸಿಕೊಂಡು ಈಗ ಅವರಿಗೆ ವೇತನ ನೀಡದೇ ಸತಾಯಿಸುತ್ತಿದ್ದಾರೆ. ವೇತನ ನಂಬಿ ಅವರ ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದ್ದರಿಂದ ಕೂಡಲೇ ಸಂಬಂಧಪಟ್ಟವರು ನಿವೃತ್ತ ನೌಕರರ ವೇತನ ಪಾವತಿಸಬೇಕು. ವೇತನ ಪಾವತಿ ಮಾಡುವ ತನಕ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.

ತಾಪಂ ಮ್ಯಾನೇಜರ್‌ ಪ್ರಶಾಂತ ಅಂಗಡಿ, ಪಿಡಿಒ ಶಂಕರ ದ್ಯಾಮಣ್ಣವರ್‌ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ನಿವೃತ್ತ ನೌಕರರ ವೇತನ ಬಾಕಿ ಉಳಿದಿರುವ ಬಗ್ಗೆ ಮತ್ತು ಪಾವತಿಯಾಗದಿರುವ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.

ವಕೀಲ ಮಚೇಂದ್ರ ಜಾಬಾದಿ, ನಿವೃತ್ತ ನೌಕರರಾದ ಶಿವಶರಣ ಹಣಮಂತ ಅಗಸಿ, ಕೊಂಡಿಬಾ ಪವಾರ, ಗಡ್ಡೆಪ್ಪ ನಾಗರಳ್ಳಿ, ಜೆಟ್ಟೆಪ್ಪ ತಳವಾರ, ಭಾಗಣ್ಣ ಜೆಟ್ಟೆಪ್ಪ, ಸಾಹೇಬ್‌ಲಾಲ್‌ ಮಹಿಬೂಬ್‌ ಸಾಬ್‌, ಭೀಮಾಶಂಕರ ಕೋಲಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next