Advertisement
ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಶ್ರೀ ಗುರು ಸೇವಾ ಸಂಸ್ಥೆಯ 5ನೇ ವಾರ್ಷಿಕೋತ್ಸವ ಹಾಗೂ ಸಗರನಾಡು ಸಾಂಸ್ಕೃತಿಕ ಉತ್ಸವ ಶ್ರೀಗುರು ರತ್ನ ಪ್ರಶಸ್ತಿ ಪ್ರದಾನ ಮತ್ತು ನಾಡ ಪ್ರಭು ಕೆಂಪೆಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಈ ಭಾಗದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಸುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಇಲ್ಲಿಯ ಜನರ ಸಾಹಿತ್ಯಾಸಕ್ತಿ ಹೆಚ್ಚುತ್ತದೆ. ಯುವ ಸಾಹಿತಿಗಳು ಹೆಚ್ಚುತ್ತಾರೆ ಮತ್ತು ನಮ್ಮ ಕನ್ನಡ ಸಂಸ್ಕೃತಿಯು ಬೆಳೆಯುತ್ತದೆ ಎಂದರು.
Related Articles
Advertisement
ಸುರಪುರ ಸಂಸ್ಥಾನದ ಯುವರಾಜ ಲಕ್ಷ್ಮೀನಾರಾಯಣ ನಾಯಕ ಸಮಾರಂಭ ಉದ್ಘಾಟಿಸಿದರು. ಹಂದಿಗುಂದಿ ಸಿದ್ದೇಶ್ವರಮಠದ ಶಿವಾನಂದ ಮಹಾಸ್ವಾಮಿಗಳು, ಕೆಂಭಾವಿ ಹಿರೇಮಠ ಸಂಸ್ಥಾನದ ಚನ್ನಬಸವ ಶಿವಾಚಾರ್ಯರು, ಮುದನೂರ ಕೋರಿಸಿದ್ದೇಶ್ವರ ಶಾಖಾ ಮಠದ ಮಲ್ಲಕಾರ್ಜುನ ದೇವರು ಸಾನಿಧ್ಯ ವಹಿಸಿದ್ದರು. ಶಹಜಹಾನ್ ಹೆಚ್ ಮುದ್ದೆಕವಿ, ವೀಣಾ ಹೂಗಾರ, ಕನಕತಾರಾ, ಮಹದೇವ ಗಂವ್ಹಾರ ವೇದಿಕೆಯಲಿದ್ದರು.
ಕೆ.ಟಿ. ಚೆಂದ್ರು, ಕನ್ನಡ ಜನಪದ ಪರಿಷತ್ ರಾಜ್ಯ ಕಾರ್ಯದರ್ಶಿ ಡಾ| ಎಸ್. ಬಾಲಾಜಿ, ಡಿ. ಶಿವಲಿಂಗಯ್ಯ, ಚುಟುಕು ಸಾಹಿತಿ ಬೀರಣ್ಣ ಬಿ.ಕೆ, ಕವಿತಾರೆಡ್ಡಿ, ಎನ್. ಕೃಷ್ಣಪ್ಪ ಕೋಡಿಪಾಳ್ಯ, ಶಿವಶರಣಪ್ಪ ಶಿರೂರು, ಗ್ರಾಮದ ಮುಖಂಡರಾದ ದೊಡ್ಡಕೊತ್ಲೆಪ್ಪ ಹಾವಿನ, ಸಕ್ರೆಪ್ಪ ಕವಲದಾರ, ಕೃಷ್ಣ ಹಾವಿನ, ಮಲ್ಲಿಕಾರ್ಜುನಗೌಡ, ಶರಣುನಾಯಕ, ಚೌಡಪ್ಪ ಕೋಳೂರು ನಿಂಗನಗೌಡ ಮಾಲಿಪಾಟೀಲ್ ಹಾಗೂ ಗ್ರಾಮಸ್ಥರು ಇದ್ದರು.