Advertisement
ರಾಜ್ಯಪಾಲರು ಸುಗ್ರೀವಾಜ್ಞೆ ಕುರಿತು ಕೆಲವೊಂದು ಸ್ಪಷ್ಟನೆ ಕೋರಿದ್ದಾರೆ. ಲಿಖೀತವಾಗಿ ಸ್ಪಷ್ಟನೆ ನೀಡಲಾಗಿದೆಯಾದರೂ ರಾಜ್ಯಪಾಲರನ್ನು ಖುದ್ದು ಭೇಟಿ ಮಾಡಲು ಕಾನೂನು ಸಚಿವ ಟಿ.ಬಿ.ಜಯಚಂದ್ರ ಕಾಯುತ್ತಿದ್ದಾರೆ. ರಾಜ್ಯಪಾಲರು ಗುಜರಾತ್ನ ರಾಜ್ಕೋಟ್ ಗೆ ಹೋಗಿರುವುದರಿಂದ ಭೇಟಿ ಸಾಧ್ಯವಾಗಿಲ್ಲ. ಗುರುವಾರ ಬೆಳಗ್ಗೆ ರಾಜ್ಯಪಾಲರು ನಗರಕ್ಕೆ ಆಗಮಿಸಲಿದ್ದು ನಂತರ ಸಮಯ ಕೇಳಿ ಭೇಟಿ ಮಾಡಬೇಕಿದೆ. ಈ ಮಧ್ಯೆ, ಸೆ.1ರಂದು ಸುಪ್ರೀಂ ಕೋರ್ಟ್ನಲ್ಲಿ ಬಡ್ತಿ ಮೀಸಲಾತಿ ವಿಚಾರಣೆ ಬರಲಿದೆ. ಅಷ್ಟರಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಗೀಕಾರ ಪಡೆದು ಪ್ರಮಾಣ ಪತ್ರದೊಂದಿಗೆ ಸಲ್ಲಿಸಬೇಕಿದೆ. ಒಂದೊಮ್ಮೆ ರಾಜ್ಯಪಾಲರು ಸ್ಪಷ್ಟನೆ ಒಪ್ಪದೆ ಇದ್ದರೆ ಸುಗ್ರೀವಾಜ್ಞೆ ವಾಪಸ್ ಆಗಲಿದೆ. ಆಗ ಏನು ಮಾಡಬೇಕು ಎಂಬುದು ಸರ್ಕಾರಕ್ಕೆ ತಲೆಬಿಸಿಯಾಗಿದೆ.
Advertisement
ಸರ್ಕಾರಕ್ಕೆ ಬಡ್ತಿ ಮೀಸಲಾತಿ ತಲೆಬಿಸಿ
09:54 AM Aug 31, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.