Advertisement

ಶಿಕ್ಷಕ ಸಮೂಹ ಗೌರವಿಸಿ: ಗದ್ದುಗೆ

05:19 PM Mar 03, 2018 | Team Udayavani |

ನಾರಾಯಣಪುರ: ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುವ ಶಿಕ್ಷಕ ಸಮೂಹವನ್ನು ಸಮಾಜ ಪೂಜ್ಯನೀಯ ಭಾವದಿಂದ ಕಾಣುತ್ತೆ ಎಂದು ಕರವೇ ಉ.ಕ ಅಧ್ಯಕ್ಷ ಶರಣು ಗದ್ದುಗೆ ಹೇಳಿದರು. 

Advertisement

ಪಟ್ಟಣದ ಶ್ರೀಗುರು ದುರದುಂಡೇಶ್ವರ ವಿದ್ಯಾವರ್ಧಕ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆಯ 12ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮಕ್ಕಳ ಪ್ರಗತಿಗೆ ಪಾಲಕರು ಕೂಡ ಗಮನ ಹರಿಸಿ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಬೇಕು. ಆಗ ಮಾತ್ರ ಶೈಕ್ಷಣಿಕವಾಗಿ ಯಶಸ್ಸು ಹೊಂದಲು ಸಾಧ್ಯ ಎಂದರು. ಜಿಪಂ ಮಾಜಿ ಸದಸ್ಯ ಎಚ್‌.ಸಿ. ಪಾಟೀಲ್‌ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
 
ಶಹಾಪುರ ಫಕೀರೇಶ್ವರ ಮಠದ ನಿರುಪಾದೇಶ್ವರ ಶ್ರೀ, ಶ್ರೀಗುರು ದುರದುಂಡೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚಿಸಿದರು. ಬಸವ ಪೀಠದ ಉತ್ತರಾಧಿಕಾರಿ ವೃಷಬೇಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜಾ ಜೀತೇಂದ್ರನಾಯಕ ಜಹಾಗೀರದಾರ, ತಾಪಂ ಸದಸ್ಯ ಮೋಹನ ಪಾಟೀಲ್‌, ಡಾ| ಬಿ.ಬಿ. ಬಿರಾದಾರ, ಗ್ರಾಪಂ ಅಧ್ಯಕ್ಷ ಮಹಿಮಪ್ಪ ಸೊನ್ನಾಪುರ, ಶಾಮಸುಂದರ ಜ್ಯೋಷಿ, ವಿ.ಎಸ್‌. ಹಾವೇರಿ, ಕನಕು ಜೀರಾಳ, ಸುರೇಶ ದೇವೂರ, ಅಯ್ಯಪ್ಪ ಪಿಡಶೆಟ್ಟಿ, ಅಂಬಣ್ಣ ದೊರಿ, ಬಿ.ಬಿ. ಅಂಗಡಿ, ಭೀಮನಗೌಡ ತೀರ್ಥ, ಬಿ.ಎಂ. ಅಂಗಡಿ ವೇದಿಕೆ ಮೇಲಿದ್ದರು. ಸೈಲಾ ಶೆಟ್ಟರ ಪ್ರಾರ್ಥಿಸಿದರು.

ಶಾಮಸುಂದರ ಜ್ಯೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮೆದಕಿನಾಳ ವಾರ್ಷಿಕ ವರದಿ ವಾಚನ ಮಾಡಿದರು. ಪುಷ್ಪಾ ಆಲಕ್ಕಿ ಸ್ವಾಗತಿಸಿದರು. ಬಸವರಾಜ ಭದ್ರಗೋಳ ನಿರೂಪಿಸಿದರು. ಭೀಮನಗೌಡ ಬಿರಾದಾರ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next