Advertisement
ಭೌಗೋಳಿಕವಾಗಿ ಭಾರತವನ್ನು ನೋಡುವುದಾದರೆ, ಉತ್ತರ ಭಾರತಕ್ಕಿಂತ ದಕ್ಷಿಣ ಭಾರತವೇ ಸ್ಥಿತಿವಂತ ಪ್ರದೇಶ. ಇಲ್ಲಿನ ಬಹುತೇಕ ರಾಜ್ಯಗಳು ಅಭಿವೃದ್ಧಿಯ ದೃಷ್ಟಿಯಿಂದ ಹೇಳುವುದಾದರೆ, ಉತ್ತರ ಭಾರತದ ರಾಜ್ಯಗಳಿಗಿಂತ ಮುಂದಿವೆ. ಅಲ್ಲದೆ ನಮ್ಮ ತೆರಿಗೆ ಹಣ, ಉತ್ತರ ಭಾರತದ ರಾಜ್ಯಗಳಿಗೆ ಹಂಚಿಕೆಯಾಗುತ್ತಿದೆ. ನಮ್ಮ ಪಾಲಿನ ಹಣ ಬರುತ್ತಿಲ್ಲ ಎಂಬುದು ದಕ್ಷಿಣ ಭಾರತದ ರಾಜ್ಯಗಳ ಆರೋಪ. ಜಿಎಸ್ಟಿ ವ್ಯವಸ್ಥೆ ಜಾರಿಯಾದ ಮೇಲಂತೂ ಈ ಸದ್ದು ಇನ್ನಷ್ಟು ಜೋರಾಗಿ ಕೇಳುತ್ತಲೇ ಇದೆ.
Related Articles
Advertisement
ಈ ಆಕ್ಷೇಪ ಸರಿಯಾಗಿಯೇ ಇದೆ. ಆಯಾ ರಾಜ್ಯಗಳ ಆಹಾರ ವಸ್ತುಗಳ ಪ್ಯಾಕೇಟ್ ಮೇಲೆ ಎದ್ದುಕಾಣುವ ರೀತಿಯಲ್ಲಿ ಆಯಾ ಪ್ರಾದೇಶಿಕ ಭಾಷೆಗಳು ಇರಬೇಕು. ಇದರ ಜತೆಗೆಯಲ್ಲಿ ಪ್ರಾದೇಶಿಕ ಭಾಷೆ ಬರದೇ ಇರುವವರಿಗೆ ಅಥವಾ ಹೊರಗಿನಿಂದ ಬಂದವರಿಗೆ ಇಂಗ್ಲಿಷ್ವೊಂದಿದ್ದರೆ ಸಾಕು. ಆದರೆ ದಿಢೀರನೇ ದಹಿ ಎಂಬ ಪದವನ್ನು ಎಳೆತಂದದ್ದು ಏಕೆ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಅಲ್ಲದೆ ಇದರ ಅಗತ್ಯತೆಯೂ ಕೂಡ ಯಾವ ದೃಷ್ಟಿಕೋನದಲ್ಲಿಯೂ ಕಾಣಿಸುವುದಿಲ್ಲ. ಯಾವುದೇ ಭಾಷೆಯನ್ನು ಯಾರ ಮೇಲಾದರೂ ಒತ್ತಾಯಪೂರ್ವಕವಾಗಿ ಹೇರಲು ಹೊರಡುವುದು ಸರಿಯಾದ ನಡೆ ಅಲ್ಲವೇ ಅಲ್ಲ. ಭಾಷೆ ಕಲಿಯುವುದು ಅವರ ಆಸಕ್ತಿಗೆ ಬಿಟ್ಟ ವಿಚಾರ. ಆಯಾ ರಾಜ್ಯಗಳ ಜನ ತಮ್ಮ ಮಾತೃಭಾಷೆಯ ಜತೆಗೆ ಹಿಂದಿಯನ್ನಾದರೂ ಕಲಿಯಲಿ, ಇಂಗ್ಲಿಷ್ ಅನ್ನಾದರೂ ಕಲಿಯಲಿ ಅಥವಾ ವಿದೇಶಿ ಭಾಷೆಯನ್ನಾದರೂ ಕಲಿಯಲಿ. ಅದು ಮೊದಲೇ ಹೇಳಿದ ಹಾಗೆ, ಅವರಿಷ್ಟದ ವಿಚಾರವೇ ಹೌದು. ಇದಕ್ಕೆ ಬದಲಾಗಿ, ನೀವು ಇಂಥದ್ದೇ ಭಾಷೆಯನ್ನೇ ಕಲಿಯಿರಿ ಎನ್ನುವುದು ಅಥವಾ ಇಂಥ ಭಾಷೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳುವುದು ಸರಿಯಾದ ನಡೆ ಅಲ್ಲವೇ ಅಲ್ಲ. ಅಷ್ಟಕ್ಕೂ ಮೊಸರಿನ ಮೇಲೆ ಹಿಂದಿ ಪದ ದಹಿ ಎಂಬುದು ಏಕೆ ಇರಬೇಕು? ಇದಕ್ಕೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರವೇಹೇಳಬೇಕು.
ಏನೇ ಆಗಲಿ ಭಾಷೆಯಂಥ ಸೂಕ್ಷ್ಮ ವಿಚಾರದಲ್ಲಿ ಆಳುವ ಸರಕಾರಗಳು, ಸಂಸ್ಥೆಗಳು ತೀರಾ ಎಚ್ಚರಿಕೆಯಿಂದ ಇರಬೇಕು. ವಿರೋಧ ವ್ಯಕ್ತವಾದ ಮೇಲೆ ಎಫ್ಎಸ್ಎಸ್ಎಐ ತನ್ನ ಆದೇಶವನ್ನೇನೋ ಹಿಂದಕ್ಕೆ ಪಡೆದಿದೆ. ಆದರೆ ಭಾಷೆ ಕುರಿತಂತೆ ದೇಶಮಟ್ಟದಲ್ಲಿ ಆದ ವಿವಾದ ಏಕತೆಯ ದೃಷ್ಟಿಯಿಂದ ಒಳ್ಳೆಯದು ಅಲ್ಲವೇ ಅಲ್ಲ. ಈ ಬಗ್ಗೆ ಆಲೋಚಿಸಿ ಹೆಜ್ಜೆ ಇಡಬೇಕಾದ ಅಗತ್ಯ ಎಲ್ಲರಲ್ಲೂ ಇದೆ.