Advertisement

ಅಂಬಲಪಾಡಿ ಗ್ರಾಮಾಂತರ ಪ್ರದೇಶದಲ್ಲಿ ನೆರೆ ಹಾವಳಿ: ಯುವಕರಿಂದ ಸುರಕ್ಷಾ ಕ್ರಮ

04:39 PM Sep 20, 2020 | keerthan |

ಉಡುಪಿ: ಭಾರಿ ಮಳೆಯಿಂದಾಗಿ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನ ಬಂಕೇರ್ಕಟ್ಟ ಆಚಾರಿಗುಂಡಿ ಪ್ರದೇಶಗಳ ಹಲವಾರು ಮನೆಯೊಳಗೆ ರಾತೋರಾತ್ರಿ  ಮಳೆ ನೀರು ನುಗ್ಗಿದ್ದು, ನೆರವು ಕಾರ್ಯಾಚರಣೆಗೆ  ಸ್ಥಳೀಯ ಯುವಕರು ನೆರವಾದರು.

Advertisement

ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಕಾರದೊಂದಿಗೆ ನೆರೆಯಲ್ಲಿ ಸಿಲುಕಿಕೊಂಡಿದ್ದ ನೂರಾರು ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಯುವಕರು ಸ್ಥಳಾಂತರಿಸಿದರು.

ಇದನ್ನೂ ಓದಿ: ನಗರದಲ್ಲಿ ಜಲಪ್ರಳಯ: ಪ್ರಕೃತಿ ವಿಕೋಪ ಎದುರಿಸಲು ಉಡುಪಿ ಜಿಲ್ಲಾಡಳಿತ ಎಷ್ಟು ಸನ್ನದ್ಧ?

ಅಂಬಲಪಾಡಿ ಶ್ರೀ ವಿಠೋಬ ಭಜನಾ ಮಂದಿರ, ಬಿಲ್ಲವ ಸೇವಾ ಸಂಘ(ರಿ.) ಇದರ ಶ್ರೀ ನಾರಾಯಣಗುರು ಸಮುದಾಯ ಭವನ ಹಾಗೂ ಬಂಕೇರ್ಕಟ್ಟ ಪರಿಸರದ ಮನೆಗಳಲ್ಲಿ ತಾತ್ಕಾಲಿಕ ತಂಗುವ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next