Advertisement

8ರ ಹರೆಯದ ಬಾಲಕನ ಸಾಹಸ: ನದಿಯಲ್ಲಿ ಮುಳುಗುತ್ತಿದ್ದ 11 ವರ್ಷದ ಬಾಲಕನ ರಕ್ಷಣೆ

11:46 PM Feb 08, 2023 | Team Udayavani |

ಮುಳ್ಳೇರಿಯ: ಸ್ನಾನಕ್ಕೆಂದು ಹೊಳೆಗಿಳಿದು ಅಪಾಯಕ್ಕೆ ಸಿಲುಕಿದ್ದ 11ರ ಹರೆಯದ ಬಾಲಕನನ್ನು 8 ವರ್ಷ ವಯಸ್ಸಿನ ಬಾಲಕ ರಕ್ಷಿಸಿದ ಘಟನೆ ನಡೆದಿದೆ.

Advertisement

ಸ್ಥಳೀಯ ಬಾಲಕನೊಬ್ಬ ಪಳ್ಳಂಗೋಡು ಸಮೀಪದ ಪಯಸ್ವಿನಿ ಹೊಳೆಯಲ್ಲಿ ಸ್ನಾನಕ್ಕೆ ಇಳಿದು ಅಪಾಯಕ್ಕೆ ಸಿಲುಕಿದ್ದ. ಆಗ ಆತನ ಜತೆಗಿದ್ದ ಎಂಟರ ಹರೆಯದ ಬಾಲಕ ಪಳ್ಳಂಗೋಡಿನ ಇಬ್ರಾಹಿಂ ನಈಮಿ-ಬುಶ್ರಾ ದಂಪತಿಯ ಪುತ್ರ ಸ್ಥಳೀಯ ಎಲ್‌ಪಿ ಶಾಲೆಯ ವಿದ್ಯಾರ್ಥಿ ಮುಹಮ್ಮದ್‌ ಹಿಬಾತುಲ್ಲ (8) ಸಾಹಸದಿಂದ ಮೇಲಕ್ಕೆತ್ತಿ ರಕ್ಷಿಸಿದನು.

ಬಾಲಕನ ಸಾಹಸ ಮತ್ತು ಸಕಾಲಿಕ ಕಾರ್ಯಾಚರಣೆಯಿಂದ ಇನ್ನೊಬ್ಬ ಬಾಲಕನ ಜೀವ ಉಳಿಸಿದ ಘಟನೆಗೆ ಸಾರ್ವತ್ರಿಕ ಪ್ರಶಂಸೆ ವ್ಯಕ್ತವಾಗಿದೆ. ಸಾಹಸಿ ಬಾಲಕನನ್ನು ಎಸ್‌.ಜೆ.ಎಂ. ಜಿಲ್ಲಾ ಸಮಿತಿ ಅಭಿನಂದಿಸಿದೆ. ಕೇರಳ ಮುಸ್ಲಿಂ ಜಮಾಯತ್‌, ಎಸ್‌.ವೈ.ಎಸ್‌., ಎಸ್‌ಎಸ್‌ಎಫ್‌ ಪಳ್ಳಂಗೋಡು ಘಟಕ ವತಿಯಿಂದ ಅಭಿನಂದನೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next