Advertisement

ನೆರೆ ಪೀಡಿತರ ರಕ್ಷಣೆಗೆ ತೆರಳಿದವರೇ ಸಂಕಷ್ಟದಲ್ಲಿ

09:24 AM Aug 11, 2019 | keerthan |

ರಾಯಚೂರು: ಜಿಲ್ಲೆಯ ಲಿಂಗಸೂಗೂರಿನ ಜಲದುರ್ಗ ಸೇತುವೆ ತುಂಬಿ ಹರಿಯುತ್ತಿದ್ದು, ರಕ್ಷಣಾ ಕಾರ್ಯಕ್ಕೆ ತೆರಳಿದ ಅಧಿಕಾರಿಗಳೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಜನರ ರಕ್ಷಣೆಗೆಂದು ತೆರಳಿದ್ದ ತಹಸೀಲ್ದಾರ್ , ಎನ್ ಡಿಆರ್ ಎಫ್ ಸಿಬ್ಬಂದಿ ಕೂಡ ನೆರಗೆ ಸಿಲುಕಿದ್ದಾರೆ. ಇನ್ನೂ ನಡುಗಡ್ಡೆಗಳ ಜನರ ರಕ್ಷಣೆಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡುವ ಕುರಿತು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಜಲದುರ್ಗ ಸೇತುವೆಗೆ 5 ಲಕ್ಷ ಕ್ಯೂಸೆಕ್ ನೀರು ಹರಿದರೂ ತುಂಬಿರಲಿಲ್ಲ. ಆದರೆ, ನಿನ್ನೆ ರಾತ್ರಿ 5 ಲಕ್ಷ ಕ್ಯೂಸೆಕ್ ದಾಟಿದ್ದು ಸೇತುವೆ ಮುಳುಗಡೆಯಾಗಿದೆ. ಈಗ ಕೃಷ್ಣಾ ನದಿಯಲ್ಲಿ 5.75 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next