Advertisement

ಹೈವೋಲ್ಟೇಜ್‌ ವಿದ್ಯುತ್‌ ಮಾರ್ಗ ಬದಲಿಸಲು ಮನವಿ

05:42 PM May 25, 2022 | Team Udayavani |

ಚಿತ್ರದುರ್ಗ: ಇಂಗಳದಾಳ್‌ ಗ್ರಾಮದ ಮನೆಗಳ ಪಕ್ಕದಲ್ಲೇ ತೆಗೆದುಕೊಂಡು ಹೋಗುತ್ತಿರುವ ಹೈವೋಲ್ಟೇಜ್‌ ವಿದ್ಯುತ್‌ ಮಾರ್ಗವನ್ನು ಬದಲಿ ಮಾರ್ಗದಲ್ಲಿ ತೆಗೆದುಕೊಂಡು ಹೋಗುವಂತೆ ಸೂಚಿಸಲು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ತಾಲೂಕಿನ ಇಂಗಳದಾಳ್‌ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಮರಡಿಕೆರೆ ಬಳಿ ಗಾಳಿ ವಿದ್ಯುತ್‌ ಯಂತ್ರಗಳನ್ನು ಅಳವಡಿಸಲಾಗಿದೆ. ಅಲ್ಲಿಂದ ಸುಮಾರು 66 ಸಾವಿರ ಕೆ.ವಿ ವಿದ್ಯುತ್‌ ಮಾರ್ಗವನ್ನು ರೈತರ ಜಮೀನು ಹಾಗೂ ಇಂಗಳದಾಳ್‌ ಗ್ರಾಮದ 15-20 ಮನೆಗಳ ಮುಂಭಾಗದಲ್ಲೇ ತೆಗೆದುಕೊಂಡು ಹೋಗಲಾಗುತ್ತಿದೆ. ಒಂದು ವೇಳೆ ತಂತಿ ಹರಿದು ಬೀಳುವುದು ಇನ್ನಿತರ ಅವಘಡ ಸಂಭವಿಸಿದಾಗ ಭಾರೀ ಅನಾಹುತವಾಗುತ್ತದೆ. ಎಷ್ಟು ಕೋಟಿ ಪರಿಹಾರ ಕೊಟ್ಟರೂ ಜೀವ ವಾಪಸ್‌ ಬರುವುದಿಲ್ಲ. ಆದ್ದರಿಂದ ಹಳ್ಳಿಯಿಂದ ದೂರದಲ್ಲಿ ನಿಯಮಾನುಸಾರ ವಿದ್ಯುತ್‌ ಲೈನ್‌ ಎಳೆಯಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಪಿಡಿಒ, ತಹಶೀಲ್ದಾರ್‌ ಅವರಿಗೂ ಮನವಿ ಸಲ್ಲಿಸಿದ್ದೇವೆ ಎಂದು ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಅವರಿಗೆ ಇಂಗಳದಾಳ್‌ ಗ್ರಾಮಸ್ಥರು ತಿಳಿಸಿದರು.

ಈ ವೇಳೆ ಗ್ರಾಪಂ ಸದಸ್ಯ ಪ್ರಕಾಶ್‌, ಮುಖಂಡರಾದ ಪಿ.ಹನುಮಣ್ಣ, ಬಸವರಾಜ್‌, ಸತೀಶ್‌, ಭೀಮಣ್ಣ, ಹನುಮಕ್ಕ, ಕಮಲಮ್ಮ, ತಾಯಮ್ಮ, ಶ್ರೀಧರ್‌, ಮಹಂತೇಶ್‌, ಧರ್ಮೇಂದ್ರ, ಉಮೇಶ್‌, ವಸಂತ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next