Advertisement

ಬಸ್‌ ನಿಲುಗಡೆಗೆ ಅವಕಾಶ ನೀಡುವಂತೆ ಶಾಸಕರಿಗೆ ಮನವಿ

12:37 AM May 15, 2019 | sudhir |

ಕಾರ್ಕಳ: ಮಂಗಳೂರು ಕಾರ್ಕಳ ರಸ್ತೆಯ ಪೆಟ್ರೋಲ್ ಬಂಕ್‌ ಹಾಗೂ ಮಾರ್ಕೆಟ್ ರಸ್ತೆಯ ಬಳಿ ಬಸ್‌ ನಿಲುಗಡೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಶಾಸಕ ವಿ. ಸುನಿಲ್ ಕುಮಾರ್‌ ಅವರಿಗೆ ಭಾರತೀಯ ಕಿಸಾನ್‌ ಸಂಘದ ತಾಲೂಕು ಸಮಿತಿ ವತಿಯಿಂದ ಮನವಿ ನೀಡಲಾಯಿತು.

Advertisement

ಈ ಹಿಂದೆ ಇಲ್ಲಿ ಬಸ್‌ ನಿಲುಗಡೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಬಸ್‌ ನಿಲುಗಡೆಯನ್ನು ರದ್ದುಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿಕರು ಸೇರಿದಂತೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್‌ ನಿಲುಗಡೆಯಾಗಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್‌, ಉಪಾಧ್ಯಕ್ಷ ಕೆ.ಪಿ. ಭಂಡಾರಿ ಕೆದಿಂಜೆ, ಖಜಾಂಚಿ ಹರೀಶ್‌ ಕುಮಾರ್‌ ಕಲ್ಯಾ, ಕೊರಗ್ಗ ಶೆಟ್ಟಿ ಸಾಣೂರು, ಉದಯ ಭಟ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next