Advertisement

ರಾತ್ರಿ ವಾಹನ ತಪಾಸಣೆಗೆ ಆಗ್ರಹ : ಸೋಲಾರ್‌ ಬೀದಿ ದೀಪಗಳ ಬ್ಯಾಟರಿ ಕಳ್ಳರ ಜಾಲ ಸಕ್ರಿಯ

09:01 PM Mar 19, 2022 | Team Udayavani |

ಕಡಬ: ಜಿಲ್ಲೆಯಾದ್ಯಂತ ಸೋಲಾರ್‌ ಬೀದಿ ದೀಪಗಳ ಬ್ಯಾಟರಿಗಳನ್ನು ಕದ್ದೊಯ್ಯುವವರ ಜಾಲ ಸಕ್ರಿಯವಾಗಿದೆ. ಸ್ಥಳೀಯಾಡಳಿತಗಳು  ಅಳವಡಿಸಿದ ಸೋಲಾರ್‌ ಬೀದಿ ದೀಪಗಳ ಬೆಲೆಬಾಳುವ ಬ್ಯಾಟರಿಗಳನ್ನು ಕದ್ದೊಯ್ಯುತ್ತಿರುವುದು ನಿರಂತರವಾಗಿ ನಡೆಯುತ್ತಿದೆ.

Advertisement

ರಸ್ತೆ ಪಕ್ಕ ಹಾಗೂ ಪೆಟ್ರೋಲ್‌ ಪಂಪ್‌ಗಳ ಬಳಿ ನಿಲುಗಡೆಗೊಳಿಸಿದ ವಾಹನಗಳಿಂದ ಬ್ಯಾಟರಿಗಳನ್ನು ಎಗರಿಸುತ್ತಿದ್ದ  ಕಳ್ಳರ ಜಾಲ ಇದೀಗ ರಸ್ತೆ ಬದಿಯಲ್ಲಿ ಅಳವಡಿ ಸಲಾಗಿರುವ ಸೋಲಾರ್‌ ಬೀದಿ ದೀಪಗಳಿಂದ ಬ್ಯಾಟರಿಗಳನ್ನು ಕದ್ದೊಯ್ಯುತ್ತಿದೆ. ಜಿಲ್ಲೆ ಯಾದ್ಯಂತ ಸ್ಥಳೀಯಾಡಳಿತ ಸಂಸ್ಥೆಗಳು ಅಳವಡಿಸಿದ್ದ  ಸಾವಿರಕ್ಕೂ ಮಿಕ್ಕಿ  ಸೋಲಾರ್‌ ಬೀದಿ ದೀಪಗಳ ಬ್ಯಾಟರಿಗಳು ಕಳವಾಗಿವೆ. 2 ವರ್ಷಗಳ ಹಿಂದೆ ಕಡಬ ತಾ|ನ ವ್ಯಾಪ್ತಿಯ ಪೆರಾಬೆ, ಆಲಂಕಾರು, ಕುಟ್ರಾ ಪಾಡಿ, ನೆಲ್ಯಾಡಿ ಗ್ರಾ.ಪಂ.ಗಳು ಅಳವಡಿಸಿದ್ದ ಸೋಲಾರ್‌ ಬೀದಿ ದೀಪಗಳ  50ಕ್ಕೂ ಹೆಚ್ಚು  ಬ್ಯಾಟರಿಗಳನ್ನು  ಒಂದೇ ದಿನ  ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಕೆಲವು ದಿನಗಳ ಹಿಂದೆ ಕುಟ್ರಾಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ  ಸೋಲಾರ್‌  ಬೀದಿ ದೀಪಗಳಿಗೆ ಅಳವಡಿಸಿದ ಹಲವು ಬ್ಯಾಟರಿಗಳು ಮತ್ತೆ  ಕಳ್ಳರ ಪಾಲಾಗಿವೆ.

ಆದರೆ ಪೊಲೀಸ್‌ ಠಾಣೆಯ ತನಕ ತಲುಪದ ಬ್ಯಾಟರಿ ಕಳ್ಳತನದ ಪ್ರಕರಣಗಳು ಇನ್ನಷ್ಟು ಇರಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಸೋಲಾರ್‌ ಬೀದಿ ದೀಪಗಳಿಂದ ಮತ್ತು ವಾಹನಗಳಿಂದ ಬ್ಯಾಟರಿಗಳನ್ನು ಕದ್ದೊಯ್ಯುವ ವ್ಯವಸ್ಥಿತ ಜಾಲ ಇದಾಗಿದ್ದು, ಕಳ್ಳರ ತಂಡ ಹಗಲು ಹೊತ್ತಿನಲ್ಲಿ ಬಂದು ನಿರ್ಜನ ಪ್ರದೇಶದ ಬೀದಿ ದೀಪಗಳನ್ನು ಗುರುತಿಸಿಕೊಂಡು ರಾತ್ರಿ ಕಾರ್ಯಾಚರಣೆಗಿಳಿಯುತ್ತವೆ.

ಭೀತಿ ಇಲ್ಲದಿರುವುದೇ ಕಾರಣ :

ಪೊಲೀಸರ ಭೀತಿ ಇಲ್ಲದಿರುವುದೇ ಕಾರಣ ಎನ್ನುವುದು ಸಾರ್ವಜನಿಕರ ಅಭಿ ಪ್ರಾಯ. ಹೆಚ್ಚಿನ ಕಡೆ ಸಿ.ಸಿ. ಕೆಮರಾ ಗಳನ್ನು ಅಳವಡಿಸಲಾಗಿದ್ದರೂ ನಿರ್ವ ಹಣೆಯ ಕೊರತೆಯಿಂದಾಗಿ ಅವುಗಳು ಕಾರ್ಯ ನಿರ್ವಹಿಸದಿರುವುದು ಕಳ್ಳರ ಸುಳಿವು ದೊರೆ ಯದಿರಲು ಕಾರಣ ವಾಗಿದೆ. ರಾತ್ರಿ ಗಸ್ತು, ವಾಹನ ತಪಾಸಣೆಯ ಕಾರ್ಯವನ್ನು ಬಿಗಿಗೊಳಿಸಿ ಕಳ್ಳತನಗಳನ್ನು ತಡೆಯುವಲ್ಲಿ ಪೊಲೀಸರು ಗಮನಹರಿಸಬೇಕಿದೆ ಎನ್ನುವ ಆಗ್ರಹ ವ್ಯಕ್ತವಾಗಿದೆ.

Advertisement

ಸೂಕ್ತ ಕ್ರಮ ಕೈಗೊಳ್ಳ ಲಾಗುವುದು :

ಬ್ಯಾಟರಿ ಕಳವಿಗೆ ಸಂಬಂಧಿಸಿ ದಾಖಲಾಗಿರುವ ಪ್ರಕರಣಗಳ ಬಗ್ಗೆ  ಜಿಲ್ಲೆಯ ಎಲ್ಲ ಠಾಣೆಗಳಿಂದ ಮಾಹಿತಿ ತರಿಸಿಕೊಂಡು ಕಳ್ಳರ ಜಾಲವನ್ನು ಬೇಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ರಿಷಿಕೇಶ್‌ ಭಗವಾನ್‌, ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಇನ್ನೂ ಪತ್ತೆಯಾಗಿಲ್ಲ  :

ಹಲವು  ಪ್ರಕರಣಗಳು ದಾಖಲಾಗಿವೆ. ಆದರೆ ಯಾವುದೂ ಪತ್ತೆಯಾಗಿಲ್ಲ.  ಪ್ರಸ್ತುತ ಪ್ರತ್ಯೇಕ ಬ್ಯಾಟರಿಯ ಬದಲು ಸೋಲಾರ್‌ ಪ್ಯಾನಲ್‌ಗೇ ಅಳವಡಿಸಲಾಗಿರುವ ಬ್ಯಾಟರಿಗಳು ಇರುವ ಬೀದಿದೀಪಗಳನ್ನು  ಅಳವಡಿಸಲಾಗುತ್ತಿದೆ. ನವೀನ್‌ ಭಂಡಾರಿ ಎಚ್‌., ಇಒ, ಕಡಬ-ಪುತ್ತೂರು  ತಾ.ಪಂ.

 

– ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next