Advertisement

ಎಡದಂಡೆ ಕಾಲುವೆ ದುರಸ್ತಿ: ಸ್ಥಳಕ್ಕೆ ಎಂಡಿ ಭೇಟಿ

05:50 PM Jul 14, 2022 | Team Udayavani |

ಹುಣಸಗಿ: ಬಸವಸಾಗರ ಎಡದಂಡೆ ಮುಖ್ಯಕಾಲುವೆ ಅಗ್ನಿ ಬಳಿ ದುರಸ್ತಿ ಕಾಮಗಾರಿ ಸ್ಥಳಕ್ಕೆ ಬುಧವಾರ ಕೆಬಿಜೆಎನ್‌ಎಲ್‌ ಎಂ.ಡಿ. ಶಿವಕುಮಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಈ ವೇಳೆ ಮಾತನಾಡಿದ ಅವರು, ಈಗಾಗಲೇ ಜಲಾಶಯ ಭರ್ತಿಯಾಗಿದ್ದು, ರೈತರ ಹಿತದೃಷ್ಟಿಯಿಂದ ವಾರದೊಳಗೆ ಕಾಮಗಾರಿ ಮುಗಿಸಬೇಕು ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.

ವರುಣನ ಅರ್ಭಟದಿಂದಾಗಿ ಕಾಲುವೆ ಕೆಲಸಕ್ಕೆ ಸಮಸ್ಯೆಯಾಗಿದ್ದು, ಈಗಾಗಲೇ ಮರುಮ್‌ ಟ್ರಿಮ್ಮಿಂಗ್‌ ಕೆಲಸ ಮುಗಿದಿದೆ. ಆರ್‌ಸಿಸಿ ಲೈನಿಂಗ್‌ ಕೆಲಸ ಮಾತ್ರ ಬಾಕಿಯಿದೆ. ಜು. 20ರ ನಂತರ ಆದಷ್ಟು ಬೇಗ ಐಸಿಸಿ ಸಭೆ ಕರೆದು ಕಾಲುವೆಗೆ ನೀರು ಹರಿಸುವ ಕುರಿತು ನಿರ್ಣಯಿಸಲಾಗುತ್ತದೆ ಎಂದು ತಿಳಿಸಿದರು.

ಜಲಾಶಯದಲ್ಲಿ 29 ಟಿಎಂಸಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ. ಅಗ್ನಿ ಬಳಿ ಪದೇ ಪದೆ ಕಾಲುವೆ ಕುಸಿತಕ್ಕೆ ಸರಕಾರ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದು, ಮುಂದಿನ ದಿನಗಳಲ್ಲಿ ನವೀನ ತಂತ್ರಜ್ಞಾನದ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು. ಮುಖ್ಯ ಅಭಿಯಂತರ ಅಶೋಕ ವಾಸನದ, ಇಇ ಪ್ರಕಾಶ ಮುದುಗಲ್‌, ಎಇಇ ಗಳಾದ ರವಿಕುಮಾರ ಸೇರಿದಂತೆ ಸಿಬ್ಬಂದಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next