Advertisement
ದ.ಕ. ಜಿಲ್ಲೆ – ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ, ಅಪಾಯಕಾರಿ ತಿರುವುಗಳನ್ನು ಒಳಗೊಂಡಿರುವ ಚಾರ್ಮಾಡಿ ಘಾಟಿ ರಸ್ತೆಯ ಬದಿಯ ತಡೆಬೇಲಿಯೂ ಶಿಥಿಲಗೊಂಡಿರುವುದರಿಂದ ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಕೆಲವು ತಿರುವುಗಳಲ್ಲಿ ಮರಳಿನ ಚೀಲಗಳನ್ನು ಇರಿಸಲಾಗಿದೆ. ಶಿರಾಡಿ ಘಾಟಿ ರಸ್ತೆಗೆ ಕಾಂಕ್ರಿಟ್ ಹಾಕುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಗೊಳಿಸಿದ ಕಾರಣ ಪರ್ಯಾಯ ಮಾರ್ಗವಾಗಿ ಬೆಂಗಳೂರು ಮೊದಲಾದೆಡೆ ತೆರಳುವ ಅನೇಕ ಖಾಸಗಿ ವಾಹನಗಳು, ಬಸ್ ಗಳು, ಲಾರಿಗಳು ಚಾರ್ಮಾಡಿ ಘಾಟಿ ರಸ್ತೆಯನ್ನೇ ನೆಚ್ಚಿಕೊಂಡಿದ್ದವು. ಅನೇಕ ಬಾರಿ ರಸ್ತೆ ಬ್ಲಾಕ್ ಆಗಿ ಪ್ರಯಾಣಿಕರು ಕಷ್ಟ ಅನುಭವಿಸಿದ್ದರು. ಹೆದ್ದಾರಿಯ ಅನೇಕ ಮೋರಿಗಳು ತನ್ನ ಬಲ ಕಳೆದುಕೊಂಡಿದೆ.
ಘಾಟಿ ರಸ್ತೆಯ ಕೊನೆಯ ತಿರುವಿನಲ್ಲಿ ರಸ್ತೆಯ ಹೊಂಡಗಳು ಒಂದೆಡೆಯಾದರೆ, ಹೊಂಡವನ್ನು ತಪ್ಪಿಸಿ ಘನ ವಾಹನಗಳು ತಿರುವಿನಲ್ಲಿ ತಿರುಗುವಾಗ ತಡೆಬೇಲಿ ಇಲ್ಲದ ಕಂದಕಗಳನ್ನು ನೋಡಿದರೆ ಭಯವಾಗುತ್ತದೆ. ಅವಘಡ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವುದು ಉತ್ತಮ.
- ರಾಜೇಶ್ ಎಂ. ಪ್ರಯಾಣಿಕ