Advertisement

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

12:56 AM Jun 18, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯವಾಗಿರುವ ಆತನ ಮೊಬೈಲ್‌ಗಾಗಿ ಪೊಲೀಸರು ಸೋಮವಾರ ಸುಮನಹಳ್ಳಿಯ ರಾಜಕಾಲುವೆ ಬಳಿ ಬಿಬಿಎಂಪಿ ಸಿಬಂದಿಯ ಸಹಾಯದೊಂದಿಗೆ ಶೋಧ ನಡೆಸಿದರು.

Advertisement

ಆರೋಪಿಗಳು ಶವವನ್ನು ಎಸೆದಿದ್ದ ರಾಜಕಾಲುವೆಯಲ್ಲಿ ಮೊಬೈಲ್‌ಗಾಗಿ ಹತ್ತಕ್ಕೂ ಹೆಚ್ಚು ಪೌರಕಾರ್ಮಿಕರು ಸುಮಾರು 3 ಗಂಟೆಗೂ ಅಧಿಕ ಕಾಲ 200 ಮೀಟರ್‌ ವ್ಯಾಪ್ತಿಯಲ್ಲಿ ಶೋಧಿಸಿದರು. ಆದರೆ ಮೊಬೈಲ್‌ ಪತ್ತೆಯಾಗಿಲ್ಲ.
10 ದಿನ ಕಳೆದರೂ ಪತ್ತೆಯಾಗದ ಮೊಬೈಲ್‌ ರೇಣುಕಾಸ್ವಾಮಿ ಕೊಲೆಯಾಗಿ 10 ದಿನ ಕಳೆದರೂ ಆತನ ಮೊಬೈಲ್‌ ಇನ್ನೂ ಪತ್ತೆಯಾಗಿಲ್ಲ.

ಪ್ರಕರಣದಲ್ಲಿ ಆ ಮೊಬೈಲ್‌ ಮಹತ್ವದ ಸಾಕ್ಷ್ಯವಾಗಲಿದೆ. ಆರೋಪಿಗಳು ಕೊಲೆಗೂ ಮುನ್ನ ರೇಣುಕಸ್ವಾಮಿಯಿಂದ ಪವಿತ್ರಾಗೌಡಳಿಗೆ ಕ್ಷಮೆ ಕೇಳುವ ವೀಡಿಯೋ ರೇಣುಕಾಸ್ವಾಮಿಯ ಮೊಬೈಲ್‌ನಲ್ಲೇ ಆರೋಪಿಗಳು ಸೆರೆ ಹಿಡಿದಿದ್ದರು. ಆದರಿಂದ ರೇಣುಕಾಸ್ವಾಮಿ ಮೊಬೈಲ್‌ ಟವರ್‌ ಲೊಕೇಶನ್‌ ಪರಿಶೀಲಿಸಿದಾಗ ರಾಜಕಾಲುವೆ ಬಳಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮೊಬೈಲ್‌ ಪತ್ತೆಗೆ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

ರೇಣುಕಾಸ್ವಾಮಿಗೆ ವಿದ್ಯುತ್‌ ಶಾಕ್‌ನೀಡಿದ್ದ ಧನರಾಜ್‌ ಸೆರೆ
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ರಾಜು ಅಲಿಯಾಸ್‌ ಧನರಾಜ್‌ನನ್ನು ರವಿವಾರ ಬಂಧಿಸಲಾಗಿದೆ. ರೇಣುಕಾಸ್ವಾಮಿಗೆ ವಿದ್ಯುತ್‌ ಶಾಕ್‌ ನೀಡಿದ ಆರೋಪ ಈತನ ಮೇಲಿದೆ. ಆತನಿಂದ ಕರೆಂಟ್‌ ಶಾಕ್‌ ನೀಡಲು ಬಳಸಿದ ಮೆಗ್ಗರ್‌ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ. ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಲಿರುವುದರಿಂದ ದರ್ಶನ್‌ ಮತ್ತು ಗ್ಯಾಂಗ್‌ಗೆ ಬಲವಾದ ಸಂಕಷ್ಟ ಎದುರಾಗಿದೆ ಎಂದು ಮೂಲಗಳು ಹೇಳಿವೆ. 9ನೇ ಆರೋಪಿಯಾಗಿರುವ ಧನರಾಜ್‌, ಕರೆಂಟ್‌ ಶಾಕ್‌ ನೀಡಲು ನಂದೀಶ್‌ ಜತೆಗೂಡಿದ್ದ ಎಂಬ ಆರೋಪವಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next