Advertisement

Renukaswamy Case ಫೋಟೋ ವೈರಲ್‌ನಲ್ಲಿ ಜೋಶಿ ಕೈವಾಡ: ಲಾಡ್‌

11:27 PM Sep 10, 2024 | Team Udayavani |

ಹುಬ್ಬಳ್ಳಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಫೋಟೋಗಳ ವೈರಲ್‌ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರದೇ ಕೈವಾಡ ಇರಬಹುದೆಂಬ ಅನುಮಾನ ಮೂಡುತ್ತಿದೆ. ಅಷ್ಟು ನಿಖರವಾಗಿ ಯಾರು ಫೋಟೋ ಹರಿಬಿಟ್ಟಿದ್ದಾರೆ ಎಂದು ಹೇಳುತ್ತಾರೆ ಅಂದರೆ ಅವರಿಗೆ ಎಲ್ಲ ಮಾಹಿತಿ ಇರಬಹುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಮುಡಾ, ವಾಲ್ಮೀಕಿ ಹಗರಣ ಮರೆಮಾಚುವ ಪ್ರಶ್ನೆ ಇಲ್ಲ. ಮುಡಾ ಹಗರಣದ ಬಗ್ಗೆ ಜೋಶಿಯವರಿಗೆ ಪ್ರಶ್ನೆ ಮಾಡಿ ಆಗ ಸತ್ಯ ಗೊತ್ತಾಗಲಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ಮೇಲೆ ಏಕೆ ಪ್ರಾಸಿಕ್ಯೂಸನ್‌ ಹಾಕಿದ್ದಾರೆ. ಇನ್ನು 127 ಸೈಟ್‌ ಪಡೆದವರ ಮೇಲೆ ಏಕೆ ಇಲ್ಲ ಎಂದು ಪ್ರಶ್ನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next