Advertisement

Renukaswamy case: ಪುತ್ರಿ ನೋಡಿ ಪವಿತ್ರಾ ಕಣ್ಣೀರು; ಕ್ಷಮೆಯಾಚನೆ

12:03 PM Jun 26, 2024 | Team Udayavani |

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣ ದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾಗೌಡ, ಪುತ್ರಿ ಹಾಗೂ ಕುಟುಂಬ ಸದಸ್ಯರು ಕಂಡು ಕಣ್ಣೀರಿಟ್ಟಿದ್ದಾಳೆ.

Advertisement

ಮಂಗಳವಾರ ಪುತ್ರಿ ಖುಷಿ, ಸಹೋದರ ‌ ಹಾಗೂ ಪೋಷಕರು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ತೆರಳಿ ಪವಿತ್ರಾಗೌಡಳನ್ನು ಭೇಟಿಯಾಗಿ ಕೆಲ ಹೊತ್ತು ಮಾತನಾಡಿದರು. ಆಗ ಪುತ್ರಿಯನ್ನು ಕಂಡ ಪವಿತ್ರಾಗೌಡ, ಕೆನ್ನೆ ಸವರುತ್ತ ಕಣ್ಣೀರಿಟ್ಟಿದ್ದಾಳೆ. ಕ್ಷಮಿಸಿ ಎಂದೆಲ್ಲ ಕೇಳಿಕೊಂಡಿದ್ದಾರೆ. ಆಗ ಸಹೋದರ ಹಾಗೂ ಪೋಷಕರು ಧೈರ್ಯ ತುಂಬಿ, ನಾವು ನಿನ್ನೊಂದಿಗೆ ಇದ್ದೇವೆ. ಯೋಜನೆ ಮಾಡಬೇಡ ಎಂದು ಆತ್ಮವಿಶ್ವಾಸ ತುಂಬಿ, ವಾಪಸ್‌ ತೆರಳಿದರು.

ಬ್ಯಾಗ್‌ ಕೊಂಡೊಯ್ದ ಸಹೋದರ:
ಆ ನಂತರ ಮಧ್ಯಾಹ್ನ ಮತ್ತೂಮ್ಮೆ ಕಾರಿನಲ್ಲಿ ಬಂದ ಪವಿತ್ರಾಗೌಡ ಸಹೋದರ ಯಾರೊಂ ದಿಗೆ ಮಾತನಾಡದೆ ನೇರವಾಗಿ ಕಾರಾಗೃಹದ ಬಳಿ ಅಧಿಕಾರಿಗಳ ಜತೆ ಕೆಲ ಕಾಲ ಚರ್ಚಿಸಿದ್ದಾರೆ. ನಂತರ ಕಾರಿನ ಬಳಿ ಬಂದು ಕಪ್ಪು ಬಣ್ಣದ ಬ್ಯಾಗ್‌ ಕೊಂಡೊಯ್ದು, ಪವಿತ್ರಾಗೌಡಗೆ ಕೊಡಲಾಗಿದೆ. ಅದರಲ್ಲಿ ಊಟ ಹಾಗೂ ದಿನ ಬಳಕೆ ವಸ್ತುಗಳು ಇತ್ತು ಎಂದು ಹೇಳಲಾಗಿದೆ. ಐಷಾರಾಮಿ ಜೀವನ, ಡಯಟ್‌ ಮಾಡಿಕೊಂಡು ಜೀವನ ನಡೆಸುತ್ತಿದ್ದ ಪವಿತ್ರಾಗೌಡಗೆ ಜೈಲಿನಲ್ಲಿ ನೀಡುವ ಅನ್ನ, ಮುದ್ದೆ, ಚಪಾತಿ ಇಷ್ಟವಾಗುತ್ತಿಲ್ಲ. ಜತೆಗೆ ಸೊಳ್ಳೆ ಕಾಟಕ್ಕೆ ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ಆಕೆಗೆ ಅಗತ್ಯವಿರುವ ವಸ್ತುಗಳನ್ನು ಸಹೋದರ ಬ್ಯಾಗ್‌ನಲ್ಲಿ ಕೊಂಡೊಯ್ದಿದ್ದಾನೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next