Advertisement

Renukaswamy Case: ನಟ ದರ್ಶನ್ ರಕ್ಷಣೆಗೆ ನಾನು ನಿಂತಿಲ್ಲ: ಜಮೀರ್ ಅಹಮದ್

07:40 PM Jun 22, 2024 | keerthan |

ವಿಜಯಪುರ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಚಿತ್ರನಟ ದರ್ಶನ ರಕ್ಷಣೆಗೆ ನಿಂತಿದ್ದಾಗಿ ನನ್ನ ಹೆಸರು ಹೇಳದಿದ್ದರೂ ಮಾಧ್ಯಮಗಳಲ್ಲಿ ಪರೋಕ್ಷವಾಗಿ ನನ್ನ ವಿರುದ್ಧ ವರದಿಯಾಗಿದೆ. ಪೊಲೀಸರ ಮೇಲೆ ನಾನು ಯಾವುದೇ ಒತ್ತಡ ಹೇರಿಲ್ಲ ಎಂದು ಸಚಿವ ಜಮೀರ್ ಅಹಮದ್ ಸಮಜಾಯಿಸಿ ನೀಡಿದರು.

Advertisement

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಜಮೀರ್, ದರ್ಶನ ಹಾಗೂ ನಾನು ಒಳ್ಳೆಯ ಸ್ನೇಹಿತರು. ಆದರೆ ಹತ್ಯೆ ಪ್ರಕರಣದಲ್ಲಿ ನಾನು ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾರೂ ಕೂಡ ದರ್ಶನ್ ಪರ ಪೊಲೀಸರ ಮೇಲೆ ಒತ್ತಡ ಹೇರಿಲ್ಲ. ಕಾನೂನು ಚೌಕಟ್ಟಿನಲ್ಲಿ ಎಲ್ಲ ರೀತಿಯಲ್ಲೂ ತನಿಖೆ ನಡೆಯಲಿದೆ. ಪೊಲೀಸರ ಬಂಧಿಸಿದ್ದು, ನ್ಯಾಯಾಲಯ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

ಇಂಥ ಘಟನೆ ಮಾಡಿದಾಗ ಆರೋಪಿಗಳ ಪರ ಯಾರು ನಿಲ್ಲುತ್ತಾರೆ ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ ಜಮೀರ್, ತಪ್ಪು ಮಾಡಿದ್ದರೆ ತಪ್ಪೇ. ದರ್ಶನ್ ಇದ್ದರೂ ಸರಿ, ನಾನಿದ್ದರೂ ಸರಿ, ಉಪ್ಪು ತಿಂದವ ನೀರು ಕುಡಿಯಲೇಬೇಕು ಎಂದರು.

ದರ್ಶನ ಪರ ಕಾಂಗ್ರಸ್ ಶಾಸಕ ಗೋವಿಂದಗೌಡ ಮಾತನಾಡಿದ್ದರೂ ಅದು ಅವರವರ ಅಭಿಪ್ರಾಯ, ಇದು ನನ್ನ ಅಭಿಪ್ರಾಯ ಹೇಳಿದ್ದೇನೆ. ಜೆಡಿಎಸ್ ಶಾಸಕ ಸೂರಜ್ ರೇವಣ್ಣ ಸಲಿಂಗ ಕಾಮದ ಆರೋಪದ ಬಗ್ಗೆ ನಾನು ಕೇಳಪಟ್ಟಿದ್ದೇನೆ, ಆದರೆ ನೋಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next