Advertisement

ಧಾರ್ಮಿಕ ವಸಂತ ಶಿಬಿರ ಆರಂಭ

03:02 PM Apr 22, 2017 | Team Udayavani |

ಕಲಬುರಗಿ: ನಗರದ ಬಿದ್ದಾಪುರ ಕಾಲೋನಿಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರ ಬೆಳಗ್ಗೆ “ಧಾರ್ಮಿಕ ವಸಂತ ಶಿಬಿರ’ ಆರಂಭಗೊಂಡಿತು. ಶಿಬಿರದ ಸಂಯೋಜಕರಾದ ನವಲಿ ಕೃಷ್ಣಾಚಾರ್ಯ ವಕೀಲರು ಉದ್ಘಾಟಿಸಿದರು.

Advertisement

ಮಂತ್ರಾಲಯದ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಅಧ್ಯಾಪಕ ಪಂ| ಮಂಚಾಲಿ ಪದ್ಮನಾಭಾಚಾರ್ಯ ಹಾಗೂ ವ್ಯಾಕರಣ ಅಧ್ಯಾಪಕ ಪಂ| ಮಧುಸೂದನಾಚಾರ್ಯ ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನವಲಿ ಕೃಷ್ಣಾಚಾರ್ಯರು, ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದಂಗಳ ಆಜ್ಞೆಯಂತೆ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಏ. 21ರಿಂದ 30ರ ವರೆಗೆ ನಡೆಯಲಿದೆ ಎಂದರು. 

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಮಂತ್ರಾಲಯದ “ಶ್ರೀ ಗುರು  ಸಾರ್ವಭೌಮ ಸಂಸ್ಕೃತ ವಿದ್ಯಾಪೀಠ’, ಅಖೀಲ ಭಾರತ ಮಧ್ವ ಮಹಾ ಮಂಡಳ, ಉಡುಪಿಯ ಪೇಜಾವರ ಅಧೋಕ್ಷಜ ಮಠಗಳ ಸಂಯುಕ್ತ ಆಶ್ರಯದಲ್ಲಿ ಶಿಬಿರವು ಬೆಳಗ್ಗೆ  7:30ರಿಂದ 9:00ರ ವರೆಗೆ ಹಾಗೂ ಸಂಜೆ 5:30ರಿಂದ ರಾತ್ರಿ 8:00 ಗಂಟೆ ವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು. 

ಮಂತ್ರಾಲಯದ ಪಂ| ಮಂಚಾಲಿ ಪದ್ಮನಾಭಾಚಾರ್ಯ, ಪಂ| ಮಧುಸೂದನಾಚಾರ್ಯರು ಶಿಬಿರ ನಡೆಸಿಕೊಡಲಿದ್ದಾರೆ. ಶ್ರೀ ಮಠದ ಅರ್ಚಕ ಶ್ಯಾಮಾಚಾರ್ಯ ಹಾಗೂ ಇನ್ನಿತರ ಪ್ರಮುಖರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next