Advertisement

ಧಾರ್ಮಿಕ ಸೌಹಾರ್ದತೆಯ ಸಂದೇಶ: ದೇವಾಲಯದಲ್ಲಿ ಮುಸ್ಲಿಂ ಜೋಡಿಯ ವಿವಾಹ

04:30 PM Mar 06, 2023 | Team Udayavani |

ಶಿಮ್ಲಾ: ಧಾರ್ಮಿಕ ಸೌಹಾರ್ದತೆಯ ಸಂದೇಶ ನೀಡಲು ಹಿಮಾಚಲ ಪ್ರದೇಶದ ರಾಮ್‌ಪುರದ ಹಿಂದೂ ದೇವಾಲಯದ ಆವರಣದಲ್ಲಿ ಇಸ್ಲಾಮಿಕ್ ವಿವಾಹ ಪದ್ಧತಿಯಂತೆ ಮುಸ್ಲಿಂ ಜೋಡಿಯ ವಿವಾಹ ಭಾನುವಾರ ನೆರವೇರಿದೆ.

Advertisement

ವಿಶ್ವ ಹಿಂದೂ ಪರಿಷತ್ತಿನ ಠಾಕೂರ್ ಸತ್ಯನಾರಾಯಣ ದೇವಸ್ಥಾನದ ಆವರಣದಲ್ಲಿ ವಿವಾಹ ನೆರವೇರಿತು. ಮುಸ್ಲಿಂ ಮತ್ತು ಹಿಂದೂ ಸಮಾಜದ ಜನರೆಲ್ಲರೂ ಸಮಾರಂಭಕ್ಕೆ ಸಾಕ್ಷಿಯಾದರು. ದೇವಸ್ಥಾನದ ಆವರಣದಲ್ಲೇ ಮೌಲ್ವಿ, ಸಾಕ್ಷಿಗಳು ಮತ್ತು ವಕೀಲರ ಸಮ್ಮುಖದಲ್ಲಿ ನಿಕಾಹ ನೆರವೇರಿಸಲಾಯಿತು. ಧಾರ್ಮಿಕ ಸೌಹಾರ್ದತೆ ಹಾಗೂ ಸಹೋದರತ್ವದ ಸಂದೇಶ ಸಾರುವ ಉದ್ದೇಶವೇ ಪ್ರಮುಖವಾಗಿತ್ತು.

ಸತ್ಯನಾರಾಯಣ ದೇವಸ್ಥಾನ ಸಂಕೀರ್ಣವು ವಿಹೆಚ್ ಪಿ ಮತ್ತು ಆರ್‌ಎಸ್‌ಎಸ್‌ನ ಜಿಲ್ಲಾ ಕಚೇರಿಯಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವಿನಯ್ ಶರ್ಮಾ ಎಎನ್‌ಐಗೆ ತಿಳಿಸಿದರು.

ವಿಹೆಚ್ ಪಿ ಮತ್ತು ಆರ್‌ಎಸ್‌ಎಸ್‌ಗಳು ಸಾಮಾನ್ಯವಾಗಿ ಮುಸ್ಲಿಂ ವಿರೋಧಿ ಎಂದು ಆರೋಪಿಸುತ್ತಾರೆ. ಆದರೆ ಇಲ್ಲೊಂದು ಮುಸ್ಲಿಂ ಜೋಡಿಯೊಂದು ಹಿಂದೂ ದೇವಾಲಯದ ಆವರಣದಲ್ಲಿ ಮದುವೆಯಾಗಿದೆ. ಇದು ಸನಾತನ ಧರ್ಮವು ಯಾವಾಗಲೂ ಎಲ್ಲರಿಗೂ ಮುಂದುವರಿಯಲು ಮತ್ತು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಲು ಪ್ರೇರೇಪಿಸುತ್ತದೆ ಎಂದು ತೋರಿಸಿ ಕೊಟ್ಟಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next