Advertisement
ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಇಳಿಯತೊಡಗಿದ್ದು, ಅದರಿಂದಾಗಿ ಇಡುಕ್ಕಿ ಜಿಲ್ಲೆಯ ಚೆರುತ್ತೋಣಿ ಅಣೆಕಟ್ಟಿನ ಎರಡು ಶಟರ್ಗಳನ್ನು ಆದಿತ್ಯವಾರ ಮತ್ತೆ ಮುಚ್ಚಲಾಗಿದೆ. ಮಹಾಪ್ರಳಯದಿಂದ ಶನಿವಾರ ವಿವಿಧ ಜಿಲ್ಲೆಗಳಲ್ಲಾಗಿ 39 ಮಂದಿ ಸಾವಿಗೀಡಾಗಿದ್ದಾರೆ. ಆದಿತ್ಯವಾರ ಬೆಳಗ್ಗೆ ಎರಡು ಮೃತ ದೇಹಗಳು ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ 193 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 359ಕ್ಕೇರಿದೆ. ಚೆಂಗನ್ನೂರು ಸಮೀಪದ ಪಾಂಡಕ್ಕಾಡಿನಲ್ಲಿ ರಕ್ಷಾ ಕಾರ್ಯಾಚರಣೆಗಳಿದ ಬೋಟ್ ದಿಢೀರ್ ನಾಪತ್ತೆಯಾಗಿದ್ದು, ಅದರಲ್ಲಿ ಆರು ಮಂದಿ ಇದ್ದರು. ಅವರ ಪತ್ತೆಗಾಗಿ ಹೆಲಿಕಾಪ್ಟರ್ನಲ್ಲಿ ಶೋಧ ನಡೆಯುತ್ತಿದೆ. ಸೇನೆ, ವ್ಯೋಮ, ನೌಕಾಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಗಳು ರಕ್ಷಾ ಕಾರ್ಯಾಚರಣೆ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಮೃತ ದೇಹಗಳು ನೀರಿನಲ್ಲಿ ತೇಲಿ ಬರುತ್ತಿರುವುದರಿಂದ ಆತಂಕಕ್ಕೆ ಕಾರಣವಾಗಿದೆ.
ಜಲ ಪ್ರಳಯದಲ್ಲಿ ಸಿಲುಕಿ ನಿರ್ಗತಿಕರಾಗಿರುವವರ ಸಂರಕ್ಷಣೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 3446 ಸಂತ್ರಸ್ತ ಶಿಬಿರಗಳನ್ನು ತೆರೆಯಲಾಗಿದೆ. ಇದರಲ್ಲಿ 1,69,935 ಕುಟುಂಬಗಳ 6,61,887 ಮಂದಿ ನಿರಾಶ್ರಿತರಿದ್ದಾರೆ.
Related Articles
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದು ಬರುತ್ತಿರುವಂತೆಯೇ ಹಲವು ಜಿಲ್ಲೆಗಳಲ್ಲಿ ನೀರಿನಲ್ಲಿ ಮೃತದೇಹಗಳು ತೇಲಿ ಬರುತ್ತಿವೆ. ಈ ಕಾರಣದಿಂದ ಪ್ರಾಕೃತಿಕ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ನಿಖರ ಅಂಕಿಅಂಶ ಲಭಿಸದಂತಾಗಿದೆ.
Advertisement