Advertisement

ರಿಲಯನ್ಸ್‌ ಇಂಡಸ್ಟ್ರೀಸ್‌ ಕೆ.ವಿ.ಕಾಮತ್‌ ಸ್ವತಂತ್ರ ನಿರ್ದೇಶಕ

12:39 AM Nov 05, 2022 | Team Udayavani |

ಮುಂಬಯಿ: ಖ್ಯಾತ ಬ್ಯಾಂಕರ್‌, ಕನ್ನಡಿಗ ಕುಂದಾಪುರ ವಾಮನ ಕಾಮತ್‌ ಅವರನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ‌ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

Advertisement

ಐದು ವರ್ಷಗಳ ಅವಧಿಗೆ ಅವರ ಅಧಿಕಾರದ ಅವಧಿ ಇರಲಿದೆ. ಕಾಮತ್‌ ಅವರನ್ನು ರಿಲಯನ್ಸ್‌ ಸ್ಟ್ರಾಟಜಿಕ್‌ ಇನ್ವೆಸ್ಟ್‌ಮೆಂಟ್‌ ಲಿಮಿಟೆಡ್‌ನ‌ ಸ್ವತಂತ್ರ ನಿರ್ದೇಶಕ ಮತ್ತು ನಾನ್‌-ಎಕ್ಸಿಕ್ಯೂಟಿವ್‌ ಚೇರ್ಮನ್‌ ಆಗಿಯೂ ನೇಮಕ ಮಾಡಲಾಗಿದೆ ಎಂದು ಎಂದು ಬಾಂಬೆ ಷೇರು ಪೇಟೆಗೆ ಕಂಪೆನಿ ಸಲ್ಲಿಸಿದ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಮುಂಬಯಿ ಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. 1971ರಲ್ಲಿ ಕಾಮತ್‌ ಅವರು ಐಸಿಐಸಿಐ ಬ್ಯಾಂಕ್‌ಗೆ ಸೇರ್ಪಡೆಯಾಗುವ ಮೂಲಕ ವೃತ್ತಿ ಜೀವನಕ್ಕೆ ಕಾಲಿರಿಸಿದ್ದರು. ಸದ್ಯ ಕಾಮತ್‌ ಅವರು ನ್ಯಾಶನಲ್‌ ಬ್ಯಾಂಕ್‌ ಫಾರ್‌ ಫೈನಾನ್ಸಿಂಗ್‌ ಇನಾ#†ಸ್ಟ್ರಕ್ಚರ್‌ ಆ್ಯಂಡ್‌ ಡೆವಲಪ್‌ಮೆಂಟ್‌ನ ಅಧ್ಯಕ್ಷರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next