Advertisement

ವಿಜಯಪುರ: ಒಂದೇ ಕುಟುಂಬದ ನಾಲ್ವರು ಸೇರಿ ಜೈಲಿನ 10 ಕೈದಿಗಳ ಬಿಡುಗಡೆ

05:29 PM Aug 14, 2022 | Team Udayavani |

ವಿಜಯಪುರ: ಭಾರತ ಸ್ವಾತಂತ್ರ್ಯ 75ನೇ ವರ್ಷಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸನ್ನಡತೆ ಆಧಾರದಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಿಂದ ಒಂದೇ ಕುಟುಂಬದ ನಾಲ್ವರು ಸೇರಿ 10 ಕೈದಿಗಳ ಬಿಡುಗಡೆಗೆ ಪಟ್ಟಿ ಸಿದ್ಧವಾಗಿದೆ.

Advertisement

ನಗರದ ಕೇಂದ್ರ ಕಾರಾಗೃಹದಿಂದ ಆ.15 ರಂದು ಸ್ವಾತಂತ್ರ್ಯದ ಧ್ವಜಾರೋಹಣದ ಬಳಿಕ ಸನ್ನಡತೆ ಆಧಾರದಲ್ಲಿ 10 ಕೈದಿಗಳು ಬಿಡುಗಡೆಯಾಗಲಿದ್ದಾರೆ. ಅಲ್ಲದೇ, ಉತ್ತಮ ಜೀವ ರೂಪಿಸಿಕೊಳ್ಳುವ ಭರವಸೆ ಮೂಡಿಸಿರುವ ಕೈದಿಗಳಲ್ಲಿ ಮೂವರು ಸಹೋದರರು, ಅವರ ತಂದೆ ಸೇರಿ ಒಂದೇ ಕುಟುಂಬದ ನಾಲ್ವರು ಸೇರಿರುವುದು ಗಮನಾರ್ಹ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ನಿವಾಸಿಗಳಾದ ಬಸಪ್ಪ ಮಲಕಾರಿ ಜಟಗೊಂಡ, ಗೌಡಪ್ಪ ಜಟಗೊಂಡ, ಬೆಳೆನ್ನಿ ಜಟಗೊಂಡ ಹಾಗೂ ಇವರ ತಂದೆ ಮಲಕಾರಿ ಜಟಗೊಂಡ ಜೈಲಿನಿಂದ ಬಿಡುಗಡೆ ಆಗುತ್ತಿದ್ದಾರೆ.

ಇದನ್ನೂ ಓದಿ:ಹುಮನಾವಾದ: ಸ್ವಾತಂತ್ರ್ಯ ಅಮೃತಮಹೋತ್ಸವ; ಪಟ್ಟಣದಲ್ಲಿ ಪ್ರತಿದಿನ ಹತ್ತಾರು ಜಾಥ

ಗ್ರಾಮಸ್ಥರೊಬ್ಬರ ತೋಟದಲ್ಲಿ ಹೂವು ಕೀಳಿದ್ದಾರೆ ಎಂಬ ಕಾರಣ ಎರಡು ಕುಟುಂಬಗಳ ಮಧ್ಯೆ ಜಗಳವಾಗಿದ್ದಾಗ ತಂದೆ ಹಾಗೂ ಮೂವರು ಮಕ್ಕಳು ಹೂವು ತೋಟದ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಸಂಬಂಧ ನಾಲ್ವರಿಗೂ ಎರಡು ವರ್ಷ ಶಿಕ್ಷೆಯಾಗಿತ್ತು. ಈಗ ಇವರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡ ಲಾಗುತ್ತಿದೆ.

Advertisement

ಇದಲ್ಲದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಿದ್ದಪ್ಪ ಮಾದರ, ಅಪ್ಪುಹಿರೇಮಠ, ಮಾಯಪ್ಪ ವಾಡೇದ, ಉಮಾ ಚವ್ಹಾಣ ಹಾಗೂ ಮುತ್ತವ್ಚ ನಾಗವ್ವಗೋಳ ಇವರೂ ಕೂಡ ಸನ್ನಡತೆ ಆಧಾರದಲ್ಲಿ ಆ.15 ರಂದು ವಿಜಯಪುರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next