Advertisement

ನೆರೆಯಿಂದ ಕಂಗಾಲಾದ ಉತ್ತರ ಕನ್ನಡಕ್ಕೆ ನೆರವನ್ನು ನೀಡಿ : ಶಿವರಾಮ ಹೆಬ್ಬಾರ್  

03:12 PM Aug 19, 2021 | Team Udayavani |

ಶಿರಸಿ: ನೆರೆಯಿಂದ ಉಂಟಾದ ಹಾನಿಗೆ ಕಂಗಾಲಾದ ಉತ್ತರ‌ ಕನ್ನಡಕ್ಕೆ‌ ಹೆಚ್ಚಿನ‌ ನೆರವನ್ನು‌ ಶೀಘ್ರ ಬಿಡುಗಡೆ ಮಾಡುವಂತೆ   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್  ಒತ್ತಾಯಿಸಿದ್ದಾರೆ.

Advertisement

ಇದನ್ನೂ ಓದಿ : ಕಾಗಿನಲೆ ಸ್ವಾಮೀಜಿ ಆರ್ಶಿವಾದ ಪಡೆದ ಕೇಂದ್ರ ಸಚಿವ ನಾರಾಯಣಸ್ವಾಮಿ: ಎಸ್ ಟಿ ಮೀಸಲಾತಿ ಚರ್ಚೆ

ಇಂದು (ಗುರುವಾರ‌, ಆಗಸ್ಟ್ 18) ವಿಧಾನ ಸೌಧದ ಕಾರ್ಯಾಲಯದಲ್ಲಿ ಸಿಎಂ ಭೇಟಿಯಾದ ಸಚಿವರು,  ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ಮಾಣದ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು. ಹೆಚ್ಚಿನ ಅನುದಾನವನ್ನು ಶೀಘ್ರದಲ್ಲೇ ಮಂಜೂರಿ ಮಾಡುವಂತೆ ಕೂಡ ಮನವಿ ಮಾಡಿದ್ದಾರೆ.

ಇನ್ನು,  ಅಭಿವೃದ್ಧಿಗೆ ಪೂರಕವಾಗುವ ಹಲವಾರು ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಸಚಿವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ : ಬಿಜೆಪಿಗೆ ಸಾಧ್ಯವಾದೀತೆ ಮಿಷನ್‌-60?

Advertisement
Advertisement

Udayavani is now on Telegram. Click here to join our channel and stay updated with the latest news.

Next