Advertisement

ನೋಂದಣಿ ಸ್ಥಗಿತ: ರೈತರ ಆಕ್ರೋಶ

05:21 PM Jan 24, 2022 | Team Udayavani |

ಪಿರಿಯಾಪಟ್ಟಣ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲು ಸರ್ಕಾರ ಖರೀದಿ ಮತ್ತು ನೋಂದಣಿ ಕೇಂದ್ರ ಆರಂಭಿಸಿದ್ದರೂ ಅಧಿಕಾರಿಗಳು ನೊಂದಣಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ  ಎಂದು ರೈತರು ಆರೋಪಿಸಿದರು.

Advertisement

ಈ ಸಂದರ್ಭದಲ್ಲಿ ರೈತ ಮುಖಂಡ ಶ್ರೀನಿವಾಸ್ ಮಾತನಾಡಿ ಪಟ್ಟಣದ ಎಪಿಎಂಸಿ ಯಾರ್ಡ್‍ನಲ್ಲಿರುವ ರೈತಭವನದಲ್ಲಿ ಕರ್ನಾಟಕ ಉಗ್ರಾಣ ನಿಗಮ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ವತಿಯಿಂದ 2021-22 ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದಿರುವ 2.1 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಪ್ರತಿ ಕ್ವಿಂಟಾಲ್ ಗೆ ರೂ.3377 ನಿಗದಿ ಮಾಡಿ ಖರೀದಿ ಮಾಡಲು ಈಗಾಗಲೇ ಜನವರಿ 01 ರಿಂದ ಆನ್ಲೈನ್ ನೊಂದಣಿ ಆರಂಭಿಸಲಾಗಿದ್ದರೂ ಅಧಿಕಾರಿಗಳು ಸಬಾಬು ಹೇಳಿ ರೈತರನ್ನು ಅಲೆದಾಡಿಸುತ್ತಿದ್ದಾರೆ. ರೈತರರು ಪ್ರತಿನಿತ್ಯ ಗ್ರಾಮಾಂತರ ಪ್ರದೇಶದಿಂದ ಪಟ್ಟಣಕ್ಕೆ ಬಂದು ದಿನಗಟ್ಟಲೆ ಕಾದು ನಿಂತರು ನೊಂದಣಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಸ್ವಾಮಿ, ಸುಂಡವಾಳು ಜಯಣ್ಣ, ಹರೀಶ್, ಲೋಕೇಶ್, ಕಿರಣ್ ಕುಮಾರ್, ಗೋವಿಂದೇಗೌಡ, ಪುರುಷೋತ್ತಮ್, ಮಾರೇಗೌಡ, ಕೃಷ್ಣನಾಯ್ಕ, ಗಣೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next