Advertisement

ಭತ್ತ ಮಾರಾಟಕ್ಕೆ 15ರೊಳಗೆ ಹೆಸರು ನೋಂದಾಯಿಸಿ

06:19 AM May 17, 2020 | Suhan S |

ಹೊನ್ನಾಳಿ: ಭತ್ತ ಖರೀದಿ ಕೇಂದ್ರಕ್ಕೆ ಭತ್ತ ಮಾರಾಟ ಮಾಡುವ ರೈತರು ಮೇ 15 ರೊಳಗಾಗಿ ಹೆಸರುಗಳನ್ನು ದೂರವಾಣಿ ಮೂಲಕ ನೋಂದಾಯಿಸಿಕೊಳ್ಳಬೇಕು ಎಂದು ಕೆಎಸ್‌ಎಫ್‌ಸಿ ಖರೀದಿ ಅಧಿಕಾರಿ ಷಣ್ಮುಗಸುಂದರಂ ಹೇಳಿದರು.

Advertisement

ಪಟ್ಟಣದ ಮಂಜುನಾಥ ರೈಸ್‌ಮಿಲ್‌ನಲ್ಲಿ ಗುರುವಾರ ಭತ್ತದ ಗುಣಮಟ್ಟ ಪರೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭತ್ತಕ್ಕೆ ದರ ಪ್ರತಿ ಕ್ವಿಂಟಾಲ್‌ಗೆ ಕೇಂದ್ರ ಸರ್ಕಾರ 1810 ರೂ. ಹಾಗೂ ರಾಜ್ಯ ಸರ್ಕಾರದಿಂದ 200 ರೂ. ಸೇರಿದಂತೆ ಒಟ್ಟು 2010 ರೂ. ದರ ನಿಗದಿಯಾಗಿದೆ. ಪ್ರತಿ ದಿನ ಖರೀದಿ ಕೇಂದ್ರಕ್ಕೆ ಬರುವ ಭತ್ತವನ್ನು ಮಿಲ್‌ನವರು ಪರೀಕ್ಷಿಸಿ ಖರೀದಿಸಬೇಕು. ಭತ್ತ ಖರೀದಿ ಕೇಂದ್ರಕ್ಕೆ ತರುವವರು ಮೊಬೈಲ್‌: 8310049626ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸಬೇಕು ಎಂದರು.

ಮಂಜುನಾಥ ರೈಸ್‌ಮಿಲ್‌ ಮಾಲೀಕ ಎಚ್‌.ಎ. ಉಮಾಪತಿ ಮಾತನಾಡಿ, ಕಳೆದ ಎರಡು ದಿನಗಳಿಂದ ಭತ್ತ ಖರೀದಿ ಕೇಂದ್ರಕ್ಕೆ 550 ಕ್ವಿಂಟಾಲ್‌ ಭತ್ತ ಬಂದಿದೆ. ಗುರುವಾರ ಒಂದೇ ದಿನ ದಾವಣಗೆರೆ ತಾಲೂಕಿನಿಂದ 150 ಕ್ವಿಂಟಾಲ್‌ ಭತ್ತ ತರಲಾಗಿದೆ ಎಂದು ತಿಳಿಸಿದರು.

ಆಹಾರ ನಿರೀಕ್ಷಕ ನಾಗರಾಜ್‌, ಮುಖಂಡರಾದ ರಂಜಿತ್‌, ಭತ್ತ ಮಾರಾಟಗಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next