Advertisement

ಬೆಳೆ ವಿಮೆ ನೋಂದಾಯಿಸಿ

05:08 PM Aug 15, 2022 | Team Udayavani |

ರಾಮನಗರ: 2022ರ ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪ ಹಾಗೂ ಕೀಟರೋಗ ಬಾಧೆಯಿಂದ ಬೆಳೆ ನಷ್ಟ ಸಂಭವಿಸಿದರೆ, ರೈತರಿಗೆ ಪರಿಹಾರ ನೀಡುವ ಮೂಲಕ ಭದ್ರತೆ ಒದಗಿಸುವ ಸಲುವಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬೀಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುತ್ತದೆ.  ಈ ಯೋಜನೆಯಡಿ ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟಗಳಿಗಸೆ ಅಧಿಸೂಚಿಸಲ್ಪಟ್ಟಿರುವ ವಿವಿಧ ಬೆಳೆಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ತಿಳಿಸಲಾಗಿದೆ.

Advertisement

ಮುಸುಕಿನ ಜೋಳ, ರಾಗಿ, ಹುರುಳಿ, ಕೆಂಪು ಮೆಣಸಿನಕಾು ಬೆಳೆಗಳಿಗೆ ಆ.16ರೊಳಗಾಗಿ ವಿಮಾ ಮೊತ್ತದ ಶೇ.2ರಷ್ಟು ಕೃಷಿ ಬೆಳೆಗಳಿಗೆ ವಿಮಾ ಕಂತನ್ನು ಪಾವತಿಸಿ, ರೈತರು ಅರ್ಜಿಯ ಜೊತೆಗೆ ಪಹಣಿ, ಬ್ಯಾಂಕ್‌ ಪಾಸ್‌ಪುಸ್ತಕ, ಮೊಬೈಲ್‌ ಸಂಖ್ಯೆ, ಆಧಾರ್‌ ಪ್ರತಿಗಳನ್ನು, ಹಾಜರುಪಡಿಸಿ ಹತ್ತಿರದ ಬ್ಯಾಂಕ್‌, ಗ್ರಾಮ-ಒನ್‌ ಕೇಂದ್ರಗಳಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕೃಷಿ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಉಸ್ತುವಾರಿ ಪ್ರತಿನಿಧಿ ದೂ.ಸಂ. 9008637907, ರಾಮನಗರ ತಾಲೂಕು ಪ್ರತಿನಿಧಿ ದೂ.ಸಂ. 9008139847 ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next