Advertisement

ಪುಣೆ ಬಂಟರ ಸಂಘದ ಪ್ರಾದೇಶಿಕ ಸಮಿತಿ: ಸಮ್ಮಾನ ಕಾರ್ಯಕ್ರಮಕ್ಕೆ ಚಾಲನೆ

05:23 PM Nov 18, 2018 | |

ಪುಣೆ: ಪುಣೆ ಬಂಟರ ಸಂಘದ ಉತ್ತರ ಹಾಗೂ ದಕ್ಷಿಣ ಎರಡು ಪ್ರಾದೇಶಿಕ ಸಮಿತಿಗಳ ವತಿಯಿಂದ ನ. 17 ರಂದು ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಭವನ ಲತಾ ಸುಧೀರ್‌ ಶೆಟ್ಟಿ ವೇದಿಕೆಯಲ್ಲಿ  ಸಂಘದ ಮಹತ್ವಾಕಾಂಕ್ಷೆಯ ಬಂಟರ ಭವನವನ್ನು ತನ್ನ ನೇತೃತ್ವದಲ್ಲಿ ನಿರ್ಮಿಸಿ ಲೋಕಾರ್ಪಣೆಗೊಳಿಸಿದ ಪುಣೆಯ ಅದ್ವಿತೀಯ ಸಾಧಕ ಇನ್ನ ಕುರ್ಕಿಲ್‌ ಬೆಟ್ಟು  ಬಾಳಿಕೆ ಸಂತೋಷ್‌ ಶೆಟ್ಟಿಯವರನ್ನು ಸಮ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಲಾಯಿತು.

Advertisement

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ಯುವ ಶಾಸಕರಾದ ಹರೀಶ್‌ ಪೂಂಜಾ, ಮಂಗಳೂರು ಉತ್ತರದ ಶಾಸಕ ಡಾ| ಭರತ್‌ ಶೆಟ್ಟಿ ಹಾಗೂ ಮುಂಬಯಿ ಬಂಟರ ಸಂಘದ ಪೊವಾಯಿ ಎಸ್‌ಎಂ ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಶ್ರೀಧರ್‌ ಶೆಟ್ಟಿ, ಉಡುಪಿ ಪರಿಸರದಲ್ಲಿ ತನ್ನ ಅಪ್ರತಿಮ ಮಾನವೀಯ ಸೇವೆಯ  ಮೂಲಕ ಆಪತಾºಂಧವನೆಂದೇ ಗುರುತಿಸಿಕೊಳ್ಳುವ ಶ್ರೇಷ್ಠ ಸಮಾಜಸೇವಕ ಸೂರಿ ಶೆಟ್ಟಿ ಕಾಪು, ಎಂಟಿ ಎಜುಕೇರ್‌ ಇದರ  ಸಿಎಂಡಿ ಮಹೇಶ್‌ ಶೆಟ್ಟಿ ಉಪಸ್ಥಿತರಿದ್ದರು. ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು, ಉಪಕಾರ್ಯಾಧ್ಯಕ್ಷ ಸತೀಶ್‌ ಶೆಟ್ಟಿ, ರೂಪೇಶ್‌ ಶೆಟ್ಟಿ, ಕಾರ್ಯದರ್ಶಿ ಗಣೇಶ್‌ ಪೂಂಜಾ, ಕೋಶಾಧಿಕಾರಿ ರಘು ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಂಪಾ ಎಸ್‌. ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ ಬೈಲೂರು, ಉಪ ಕಾರ್ಯಾಧ್ಯಕ್ಷ  ಸುಭಾಷ್‌ ಶೆಟ್ಟಿ, ರವಿ ಕೆ. ಶೆಟ್ಟಿ, ಕಾರ್ಯದರ್ಶಿ ಶೇಖರ್‌ ಸಿ. ಶೆಟ್ಟಿ, ಕೋಶಾಧಿಕಾರಿ ಜಗದೀಶ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಬಿ. ಶೆಟ್ಟಿ ಉಪಸ್ಥಿತರಿದ್ದರು.  

ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next