Advertisement

ಹೊಸಮಠ ಸೇತುವೆ ತಿರುವಿಗೆ ರಿಫ್ಲೆಕ್ಟರ್‌ ಅಳವಡಿಕೆ

10:01 PM May 19, 2019 | Team Udayavani |

ಕಡಬ: ಹೊಸಮಠದ ಹೊಸ ಸೇತುವೆಯ ಕಡಬ ಭಾಗದ ಸಂಪರ್ಕ ರಸ್ತೆ ಸೇತುವೆಯನ್ನು ಸೇರುವಲ್ಲಿ ದೊಡ್ಡ ತಿರುವಿನಿಂದ ಕೂಡಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ ಎನ್ನುವ ಉದಯವಾಣಿ ಸುದಿನ ವರದಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಅಧಿಕಾರಿಗಳು ಸ್ಪಂದಿಸಿದ್ದು, ಸಂಪರ್ಕ ರಸ್ತೆಗೆ ಹಳದಿ ಪಟ್ಟಿ, ತಿರುವಿನ ರಸ್ತೆಗೆ ಹಾಗೂ ತಡೆಬೇಲಿಗೆ ರಿಫ್ಲೆಕ್ಟರ್‌ ಅಳವಡಿಸಿ ಅಪಾಯ ಸಂಭವಿಸದಂತೆ ಸೂಚನ ಫಲಕಗಳನ್ನು ನೆಟ್ಟಿದ್ದಾರೆ.

Advertisement

ಉದಯವಾಣಿ ಎಚ್ಚರಿಸಿತ್ತು…
ನೂತನ ಸೇತುವೆ ಹಾಗೂ ಸಂಪರ್ಕ ರಸ್ತೆಯ ಕಾಮಗಾರಿ ಉತ್ತಮವಾಗಿ ಪೂರ್ಣಗೊಂಡಿದ್ದರೂ ಸಂಪರ್ಕ ರಸ್ತೆ ಕಡಬ ಭಾಗದಿಂದ ಸೇತುವೆಯನ್ನು ಸೇರುವಲ್ಲಿನ ತಿರುವು ಅಪಾಯಕಾರಿಯಾಗಿರುವ ಬಗ್ಗೆ ಉದಯವಾಣಿ ಸುದಿನ ತನ್ನ ಮೇ 7ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿ, ನಿಗಮದ ಅಧಿಕಾರಿಗಳ ಗಮನ ಸೆಳೆದಿತ್ತು. ಪ್ರಸಿದ್ಧ ಪುಣ್ಯಕ್ಷೇತ್ರ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ರಾಜ್ಯ ರಸ್ತೆ ಆಗಿರುವುದರಿಂದ ಇಲ್ಲಿ ಹೆಚ್ಚಿನ ಸಂಖ್ಯೆಯ ವಾಹನ ಸಂಚಾರ ಇದ್ದು, ಅಪಘಾತ ಸಂಭವಿಸುವ ಸಾಧ್ಯತೆಗಳ ಬಗ್ಗೆ ವರದಿಯಲ್ಲಿ ಎಚ್ಚರಿಸಲಾಗಿತ್ತು.

ಮುಂದೆ ತಿರುವು ಹಾಗೂ ಸೇತುವೆ ಇದೆ ಎನ್ನುವ ಮುನ್ನೂಚನೆ ನೀಡುವ ಫಲಕ ಅಳವಡಿಸುವುದರೊಂದಿಗೆ ಹೊಸಮಠ ಪೇಟೆಯಿಂದ ಸೇತುವೆಯ ಹತ್ತಿರ ತಿರುವು ಆರಂಭವಾಗುವ ಮೊದಲು ಸಣ್ಣಮಟ್ಟಿನ ರಸ್ತೆ ಉಬ್ಬು ನಿರ್ಮಿಸಿ ದೂರದಿಂದಲೇ ರಸ್ತೆ ಉಬ್ಬು ವಾಹನ ಚಾಲಕರಿಗೆ ಕಾಣಿಸುವಂತೆ ಅದಕ್ಕೆ ಬಣ್ಣ ಬಳಿದು ರಿಫ್ಲೆಕ್ಟರ್‌ ಅಳವಡಿಸಿದರೆ ಉತ್ತಮ ಎನ್ನುವುದು ಸ್ಥಳೀಯರ ಅಭಿಪ್ರಾಯವನ್ನು ಉಲ್ಲೇಖೀಸಲಾಗಿತ್ತು. ವರದಿಗೆ ಸ್ಪಂದಿಸಿದ ನಿಗಮದ ಎಇಇ ಮಂಜುನಾಥ್‌ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.

 ಕ್ರಮ ಕೈಗೊಳ್ಳಲಾಗಿದೆ
ಹೊಸಮಠದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸೇತುವೆಯ ಸಂಪರ್ಕ ರಸ್ತೆಯ ಇಕ್ಕೆಲೆಗಳಲ್ಲಿ ಮತ್ತು ಮಧ್ಯದಲ್ಲಿ ಬಣ್ಣದ ಪಟ್ಟಿ ಹಾಕಲಾಗಿದೆ. ಸೇತುವೆಯಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸಿದ ಫುಟ್‌ಪಾತ್‌ಗೊàಡೆಗಳಿಗೂ ರಿಫ್ಲೆಕ್ಟರ್‌ ಅಳವಡಿಸಿದೆ. ಸಂಪರ್ಕ ರಸ್ತೆ ಸೇತುವೆಗೆ ಸೇರುವಲ್ಲಿ ಹಾಗೂ ಸಂಪರ್ಕ ರಸ್ತೆಯ ತಿರುವಿನಲ್ಲಿ ಝೀಬ್ರಾ ಕ್ರಾಸ್‌ ರೀತಿಯಲ್ಲಿ ಹಳದಿ ಬಣ್ಣದ ಪಟ್ಟಿ ಹಾಕಿ ಅದಕ್ಕೂ ರಿಫ್ಲೆಕ್ಟರ್‌ ಅಳವಡಿಸಿದೆ. ವಾಹನಗಳ ವೇಗ ನಿಯಂತ್ರಿಸಲು ರಸ್ತೆ ಉಬ್ಬು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.
– ಮಂಜುನಾಥ್‌, ಎಇಇ, ಕೆಆರ್‌ಡಿಸಿಎಲ್‌

Advertisement

Udayavani is now on Telegram. Click here to join our channel and stay updated with the latest news.

Next