Advertisement

ತಮಿಳುನಾಡಿನಲ್ಲಿ ನಿತ್ಯ 4 ಸಾವಿರ “ಕೆಂಗಣ್ಣು’ಪ್ರಕರಣ ದೃಢ

09:38 PM Nov 22, 2022 | Team Udayavani |

ಚೆನ್ನೈ: ಕರ್ನಾಟಕದ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಕೆಲ ದಿನಗಳಿಂದ ಈಚೆಗೆ ಪ್ರತಿ ದಿನ 4 ಸಾವಿರ ಕೆಂಗಣ್ಣು (ಮದ್ರಾಸ್‌ ಐ) ಪ್ರಕರಣಗಳು ದೃಢಪಡುತ್ತಿವೆ.

Advertisement

ಆ ರಾಜ್ಯದಲ್ಲಿ ಮುಂಗಾರು ಪ್ರಕೋಪ ಶುರುವಾಗಿರುವಂತೆಯೇ ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ತಮಿಳುನಾಡು ರಾಜಧಾನಿ ಚೆನ್ನೈ ಒಂದರಲ್ಲಿಯೇ ಪ್ರತಿ ದಿನ ಕನಿಷ್ಠ 80ರಿಂದ 100 ಮಂದಿ ಕೆಂಗಣ್ಣು ಸಮಸ್ಯೆಗೆ ಒಳಗಾಗಿ, ಆಸ್ಪತ್ರೆಗಳಿಗೆ ಭೇಟಿ ನೀಡಿ, ವೈದ್ಯಕೀಯ ಸಲಹೆ ಪಡೆಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ಆರೋಗ್ಯ ಇಲಾಖೆ ಕಣ್ಣಿನ ಸುರಕ್ಷತೆಯ ಬಗ್ಗೆ ಸುತ್ತೋಲೆ ಹೊರಡಿಸಿದೆ. ಜತೆಗೆ ಸಮಸ್ಯೆಗೆ ತುತ್ತಾದವರು ಪ್ರತ್ಯೇಕವಾಗಿ ಇರಬೇಕು ಎಂದು ಮನವಿ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next