Advertisement
ನಾಮಪತ್ರ ಸಲ್ಲಿಕೆಗೆ ಎರಡು ದಿನಗಳಷ್ಟೇ ಇದ್ದರೂ, ತಾನು ಮಂಡ್ಯದಲ್ಲಿ ಸ್ಪರ್ಧಿಸುವ ಬಗ್ಗೆ ಖಚಿತ ತೀರ್ಮಾನವನ್ನು ಇನ್ನೂ ಪ್ರಕಟಿಸದ ಅಂಬಿ ಅಕ್ಷ ರಶಃ “ಕೈ’ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಈ ವಿಚಾ ರಕ್ಕಾಗಿ ಭಾನುವಾರ ಮೈಸೂರಿನಲ್ಲಿ ಸಿಎಂ ಭೇಟಿ ಮಾಡಿ ಚರ್ಚಿಸುತ್ತಾರೆನ್ನುವ ಸುದ್ದಿ ಇತ್ತಾದರೂ ಅದೂ ಹುಸಿಯಾಗಿದೆ. ಆದರೆ, ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವ ಅಂಬರೀಷ್ ಮನವೊಲಿಕೆ ಮುಂದುವರಿದೆ.
ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿದ್ದ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾಯಿಸಲಾಗಿದೆ. ತಿಪಟೂರಿನಿಂದ ನಂಜಾಮರಿ ಬದಲು ಹಾಲಿ ಶಾಸಕ ಷಡಕ್ಷರಿ, ಮಲ್ಲೇಶ್ವರಂನಿಂದ ಎಂ.ಆರ್.ಸೀತಾರಾಂ ಬದಲು ಕೆಂಗಲ್ ಹನುಮಂತಯ್ಯ ಮೊಮ್ಮಗ ಶ್ರೀಪಾದ ರೇಣು, ಪದ್ಮನಾಭನಗರದಿಂದ ಗುರಪ್ಪನಾಯ್ಡು ಬದಲು ಮಾಜಿ ಸಂಸದ ಎಂ.ಶ್ರೀನಿವಾಸ, ಮಡಿಕೇರಿಯಲ್ಲಿ ಚಂದ್ರಮೌಳಿ ಬದಲು ಚಂದ್ರಕಲಾ, ಜಗಳೂರಿನಲ್ಲಿ ಪುಷ್ಪಾ ಬದಲು ರಾಜೇಶ್ ಅವರನ್ನು ಕಣಕ್ಕಿಳಿಸಲಾಗಿದೆ. ಇಲ್ಲಿ ಜಗ ಳೂ ರಿನಲ್ಲಿ ಪುಷ್ಪಾ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ.
Related Articles
Advertisement
ನನ್ನ ಕ್ಷೇತ್ರದ ಟಿಕೆಟ್ ಘೋಷಣೆಯಾಗಿರಲಿಲ್ಲ. ಇದೀಗ ಎಲ್ಲವೂ ಸುಸೂತ್ರವಾಗಿ ಮುಗಿದಿದೆ. ನಾನು ಎಂಟು ಬಾರಿ ಬಿ ಫಾರಂ ಪಡೆದಿದ್ದೇನೆ. ಇದೇನು ಹೊಸದಲ್ಲ. ಕ್ಷೇತ್ರದ ಜನತೆ ಈ ಬಾರಿಯೂ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ.– ಡಿ.ಬಿ. ಇನಾಂದಾರ್ ಮೊದಲ ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಇದರಿಂದ ನನಗೆ ಆತಂಕವಾಗಿದ್ದು ನಿಜ. ಈಗ ಬಿ ಫಾರಂ ಸಿಕ್ಕಿದೆ. ಕ್ಷೇತ್ರದ ಜನರ ಕೆಲಸ ಮುಂದುವರಿಸುತ್ತೇನೆ. ಎಸ್.ಎಸ್.ಮಲ್ಲಿಕಾರ್ಜುನ್, ಎಂ.ಪಿ.ರವೀಂದ್ರ ಅವರಿಂದ ನನಗೆ ಟಿಕೆಟ್ ಸಿಕ್ಕಿದೆ. ಪುಷ್ಪಾ ಅವರಿಗೆ ಅಸಮಾಧಾನವಾಗಿದ್ದು , ಅವರನ್ನು ಜತೆಗೆ ಕೊಂಡೊಯ್ದು ಕೆಲಸ ಮಾಡುತ್ತೇನೆ.
– ಎಚ್.ಪಿ.ರಾಜೇಶ್ ನನಗೆ ಮೊದಲು ನಿರೀಕ್ಷೆ ಇರಲಿಲ್ಲ. ಸೀತಾರಾಂ ಅವರು ಒಪ್ಪದಿದ್ದ ಕಾರಣ ನನಗೆ ಅವಕಾಶ ಸಿಕ್ಕಿದೆ. ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಅವರು ಶಿಫಾರಸು ಮಾಡಿ ರಾಹುಲ್ ಗಾಂಧಿಯವರು ಟಿಕೆಟ್ ನೀಡಿದ್ದಾರೆ. ಇದರಿಂದ ಸಂತೋಷವಾಗಿದೆ. ಕ್ಷೇತ್ರದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ದು ಕೆಲಸ ಮಾಡುತ್ತೇನೆ.
– ಶ್ರೀಪಾದ ರೇಣು