Advertisement

ಸಚಿವ ಸ್ಥಾನ ತೊರೆಯಲು ಸಿದ್ಧ,ಅಸಮಧಾನ ತಪ್ಪಲ್ಲ:ಸಚಿವ ಡಿಕೆಶಿ 

01:35 AM Jan 20, 2019 | |

ಬೆಂಗಳೂರು: “ನಾವು ಪಕ್ಷ ನಿಷ್ಠರಾಗಿದ್ದು, ಪಕ್ಷಕ್ಕಾಗಿ ಮತ್ತೂಬ್ಬರಿಗೆ ಅವಕಾಶ ನೀಡಬೇಕೆಂದರೆ ಸಚಿವ ಸ್ಥಾನ ಬಿಟ್ಟು ಕೊಡಲು ನಾನೂ ಸೇರಿ ಎಲ್ಲ ಸಚಿವರು ಸಿದಟಛಿರಿದ್ದೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

ವಿಧಾನಸೌಧದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕೆಲ ಕಾರಣಕ್ಕೆ ಧರಂಸಿಂಗ್‌ ಅವರ ಸಂಪುಟದಲ್ಲಿ ನಾನು ಸಚಿವನಾಗಿರಲಿಲ್ಲ. ಆಗ ನಾನು ತುಟಿ ಬಿಚ್ಚದೆ ಸುಮ್ಮನಿದ್ದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಆರು ಬಾರಿ ಶಾಸಕನಾಗಿದ್ದರೂ ಸರ್ಕಾರ ರಚನೆಯಾದ ಆರಂಭದಲ್ಲಿ ಸಚಿವನಾಗಲು ಅವಕಾಶವಿರಲಿಲ್ಲ. ನಂತರ ಸಚಿವ ಸ್ಥಾನ ದೊರೆಯಿತು. ಇದೀಗ ಏಳನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹಾಗಿದ್ದರೂ ಅಗತ್ಯಬಿದ್ದರೆ ಸಚಿವ ಸ್ಥಾನ ಬಿಟ್ಟು ಕೊಡುತ್ತೇನೆ’ ಎಂದು ತಿಳಿಸಿದರು.

“ಹಿರಿಯರಾದ ವಿ.ಮುನಿಯಪ್ಪ, ರಾಮಲಿಂಗಾ ರೆಡ್ಡಿ, ರೋಷನ್‌ ಬೇಗ್‌, ಎಚ್‌.ಕೆ.ಪಾಟೀಲ್‌ ಇತರರು ಸಚಿವರಾಗಿಲ್ಲ. ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಕೆಲ ಇತಿಮಿತಿಗಳಿವೆ. ಪಕ್ಷದ ಶಾಸಕರು, ಕಾರ್ಯಕರ್ತರಿಗಾಗಿ ಎಂತಹ ತ್ಯಾಗಕ್ಕೂ ಸಿದಟಛಿ. ನಾನು ಮಾತ್ರವಲ್ಲ, ಪಕ್ಷದ ಹಿತಕ್ಕಾಗಿ ಎಲ್ಲ ಸಚಿವರು ಸ್ಥಾನ ತ್ಯಾಗಕ್ಕೆ ಸಿದಟಛಿರಿದ್ದಾರೆ’ ಎಂದು ಪುನರುಚ್ಚರಿಸಿದರು. “ಪಕ್ಷದಲ್ಲಿ ಯಾರೂ ಬಂಡಾಯವೆದ್ದಿಲ್ಲ. ಕೆಲ ಅಸಮಾಧಾನಗಳಿರಬಹುದು. ನನ್ನನ್ನು ಸೇರಿ ಜಗತ್ತಿನಲ್ಲಿ ಯಾರೊಬ್ಬರೂ ಸಂಪೂರ್ಣ ಸಂತುಷ್ಟರಲ್ಲ. ತಮ್ಮದೇ ಆದ ಆಸೆ, ಆಕಾಂಕ್ಷಿಗಳಿರುತ್ತವೆ. ಅದು ತಪ್ಪಲ್ಲ. ಹಾಗಾಗಿ, ಶಾಸಕರಾದ ಉಮೇಶ್‌ ಜಾಧವ್‌ ಮಾತ್ರವಲ್ಲ, ಎಲ್ಲರೊಂದಿಗೂ ಸಂಪರ್ಕವಿದೆ. ಅಗತ್ಯ ಬಿದ್ದಾಗ ಅವರೊಂದಿಗೆ ಮಾತನಾಡುತ್ತಿದ್ದೇನೆ. ಶಾಸಕ ನಾಗೇಂದ್ರ ಸೇರಿ ಎಲ್ಲರೊಂದಿಗೂ ಮಾತನಾಡುತ್ತೇನೆ’ ಎಂದು ಹೇಳಿದರು.

ಬಿಜೆಪಿಗೆ ಜ್ಞಾನೋದಯ: ಬಿಜೆಪಿಯವರಿಗೆ ಕೊನೆಗಾದರೂ ಜ್ಞಾನೋದಯವಾಗಿರುವುದು ಒಳ್ಳೆಯದು. ಅವರು ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದರೆ ಅದಕ್ಕೆ ಅಗತ್ಯ ಸಹಕಾರ, ಪ್ರೋತ್ಸಾಹವನ್ನು ಸರ್ಕಾರದಿಂದ ನೀಡಲಾಗುವುದು. ಬರ ನಿರ್ವಹಣೆಗೆ ಸರ್ಕಾರ ಬದಟಛಿವಾಗಿದ್ದು, ಬರ ಅಧ್ಯಯನ ನಡೆಸುವ ಬಿಜೆಪಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು. ಬಿಜೆಪಿಯವರು ಸರ್ಕಾರದ ವಿರುದಟಛಿ ಆರೋಪ ಮಾಡುವುದನ್ನು ಬಿಟ್ಟು ದೆಹಲಿಗೆ ಹೋಗಿ ಉದ್ಯೋಗ ಖಾತರಿ ಯೋಜನೆಯಡಿ ಬಾಕಿಯಿರುವ 1,500 ಕೋಟಿ ರೂ.ಬಿಡುಗಡೆಗೆ ಒತ್ತಾಯಿಸಲಿ. ತೀವ್ರ ಬರ ಇರುವುದರಿಂದ 100ರಿಂದ 150 ಮಾನವ ದಿನಗಳನ್ನು ಸೃಷ್ಟಿಸಿ ಉದ್ಯೋಗ ನೀಡಬೇಕಿದ್ದು, ಕೇಂದ್ರ ಸರ್ಕಾರದ ಬಾಕಿ ಹಣ ಬಿಡುಗಡೆಗೆ ಒತ್ತಡ ಹೇರಲಿ ಎಂದು ಹೇಳಿದರು.

ಈಗಲ್ಟನ್‌ ರೆಸಾರ್ಟ್‌ನ ದಂಡ  ಮೊತ್ತಕ್ಕೆ ಸಂಬಂಧಪಟ್ಟಂತೆ ಹಿಂದೆ ಯಾರೊಬ್ಬರೂ, ಯಾವ ಸರ್ಕಾರವೂ ಚಿಂತಿಸದಿದ್ದಾಗ ನಾನು ಕಾನೂನು ಪ್ರಕಾರ ದಂಡ ವಸೂಲಿಗೆ ಕ್ರಮ ಕೈಗೊಂಡಿದ್ದೆ. ಈ ಹಿಂದೆ ರಾಮನಗರ ಉಸ್ತುವಾರಿ ಸಚಿವನಾಗಿದ್ದಾಗಲೇ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದೆ. ಅದಕ್ಕೂ, ಶಾಸಕರು ಅಲ್ಲಿ ವಾಸ್ತವ್ಯ ಹೂಡಿರುವುದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು.

Advertisement

ಈಗಲ್ಟನ್‌ ರೆಸಾರ್ಟ್‌ನ ದಂಡ ಮೊತ್ತಕ್ಕೆ ಸಂಬಂಧಪಟ್ಟಂತೆ ಒಂದಿಷ್ಟು ಪ್ರಯತ್ನ ನಡೆಸಿ ಮಾಹಿತಿಯನ್ನು ಕಲೆ ಹಾಕಿದ್ದು, ಈ ಬಗ್ಗೆ ಬಹಿರಂಗವಾಗಿ ಚರ್ಚಿಸುವುದು ಸರಿಯಲ್ಲ. ರಾಜಕೀಯ ಬೆಳವಣಿಗೆ ಕುರಿತಂತೆ ಚರ್ಚೆ, ಲೋಕಸಭಾ ಚುನಾವಣೆಗೆ ಸಿದ್ಧತೆ,ಅಭಿವೃದ್ಧಿ  ಕಾರ್ಯಗಳ ಕುರಿತು ಶಾಸಕರು ಚರ್ಚೆ ನಡೆಸಲಿದ್ದಾರೆ. ಎಷ್ಟು ದಿನ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲು ಸಾಧ್ಯ. ಬಹುತೇಕ ಸಚಿವರು ಬರ ನಿರ್ವಹಣೆ ಕಾರ್ಯದ ಮೇಲ್ವಿಚಾರಣೆಯಲ್ಲಿ ತೊಡಗಿದ್ದು, ಜನರಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಬಳ್ಳಾರಿ ಗಣಿಬಾಧ್ಯತಾ ಪ್ರದೇಶಗಳ ಪುನರ್ವಸತಿ ಪರಿಹಾರ ನಿಧಿ ಕುರಿತಂತೆ ಸಭೆ ನಿಗದಿಯಾಗಿದ್ದರಿಂದ ಸಚಿವರಾದ ಪಿ.ಟಿ.ಪರಮೇಶ್ವರ ನಾಯ್ಕ, ತುಕಾರಾಂ, ಸಂಸದ ವಿ.ಎಸ್‌.ಉಗ್ರಪ್ಪ, ಶಾಸಕರಾದ ಆನಂದ್‌ ಸಿಂಗ್‌, ಭೀಮಾನಾಯ್ಕ, ವೈ.ಎನ್‌. ಗೋಪಾಲಕೃಷ್ಣ, ಗಣೇಶ್‌, ವಿಧಾನ ಪರಿಷತ್‌ ಸ¨ಸ್ಯ ಅಲ್ಲಂ ವೀರಭದ್ರಪ್ಪ ಇತರರು ಉಪಸ್ಥಿತರಿದ್ದರು.
ಶಾಸಕ ನಾಗೇಂದ್ರ ಗೈರಾಗಿದ್ದರು.

ಶಾಸಕರ ಒತ್ತಡದ ಹಿನ್ನೆಲೆಯಲ್ಲಿ ಹಂಪಿ ಉತ್ಸವವನ್ನು ಎರಡು ದಿನ ನಡೆಸಲು ತೀರ್ಮಾನಿಸಲಾಗಿದೆ. ಉತ್ಸವ ಆಚರಿಸಬೇಕೆಂದು ಶಾಸಕರಿಂದ ತೀವ್ರ ಒತ್ತಡವಿತ್ತು. ಜತೆಗೆ, ಕಲಾವಿದರ ವಲಯದಿಂದಲೂ ಒತ್ತಾಯವಿತ್ತು. ಆ ಹಿನ್ನೆಲೆಯಲ್ಲಿ ಎರಡು ದಿನ ಹಂಪಿ ಉತ್ಸವ ಆಚರಿಸಲು ನಿರ್ಧರಿಸಿದ್ದು, ದಿನಾಂಕ ಇತರ ಮಾಹಿತಿ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು.
● ಡಿ.ಕೆ.ಶಿವಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next