Advertisement
ತಾಲೂಕಿನ ವರ್ಲಕೊಂಡ ಗ್ರಾಮದ ವರಾಹಗಿರಿ ಬೆಟ್ಟಕ್ಕೆ ಮೆಟ್ಟಿಲು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ, ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ನಾನು ಚಿಕ್ಕಂದಿನಿಂದಲೂ ವರ್ಲಕೊಂಡ ಗ್ರಾಮದ ಬೆಟ್ಟದ ಬಗ್ಗೆ ಕೇಳಲ್ಪಟ್ಟಿದ್ದೆ, ಆದರೆ, ನಾನೆಂದೂ ಬೆಟ್ಟದತ್ತ ಬಂದಿರಲಿಲ್ಲ, ಇಂದು ಈ ದೇವರ ಕಾರ್ಯಕ್ಕೆ ಆಗಮಿಸಿ, ಚಾಲನೆ ನೀಡಿರುವುದು ನನ್ನ ಅದೃಷ್ಟ ಎಂದು ಹೇಳಿದರು.
Related Articles
Advertisement
ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ: ಟ್ರಸ್ಟ್ನಿಂದ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಚಿವರು, ವರಾಹಗಿರಿ ಬೆಟ್ಟವನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಪ್ರವಾಸೋದ್ಯಮ ಇಲಾಖೆಯಿಂದ ಈ ಸಾಲಿನಲ್ಲಿ ಬೇಕಾದ ಅನುದಾನ ಬಿಡುಗಡೆಗೊಳಿಸಲು ಸೂಚಿಸುತ್ತೇನೆ ಎಂದು ವಿವರಿಸಿದರು.
ಮೂಲ ಭೂತ ಸೌಕರ್ಯಕ್ಕೆ ಜಾಗ: ವರಾಹಗಿರಿ ಬೆಟ್ಟಕ್ಕೆ ಈಗಾಗಲೇ ವಾರಾಂತ್ಯದಲ್ಲಿ ಪ್ರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದೆ. ಆದರೆ, ವರ್ಲಕೊಂಡ ಗ್ರಾಮದಲ್ಲಿ ಹಾಗೂ ಬೆಟ್ಟದ ಬುಡದಲ್ಲಿ ಪ್ರವಾಸಿಗರಿಗೆ ಅನುಕೂಲಕರವಾಗಿ ಶೌಚಾಲಯವಾಗಲಿ, ತಂಗುದಾಣವಾಗಲಿ ಇರುವುದಿಲ್ಲ ಎಂಬ ವಿಷಯಕ್ಕೆ ಮಾತನಾಡಿದ ಸಚಿವ, ಮೂಲ ಸೌಕರ್ಯಗಳಿಗೆ ಬೆಟ್ಟದ ಬಳಿ ಭೂಮಿ ಅವಶ್ಯಕತೆ ಇದ್ದು, ಜಾಗ ಒದಗಿಸಿಕೊಡುವ ಬಗ್ಗೆ ಜಿಲ್ಲಾ ಧಿಕಾರಿಗಳ ಬಳಿ ಚರ್ಚಿಸಿ ಸೂಕ್ತ ಕ್ರಮ ವಹಿಸುತ್ತೇನೆ ಎಂದರು.
ಇದನ್ನೂ ಓದಿ;- ಶಾಸಕ ಪಾಟೀಲ್ ಹೇಳಿಕೆಗೆ ರಾಜಕೀಯ ಧ್ವನಿ
ರಸ್ತೆ ಸಂಪರ್ಕ: ಬೆಟ್ಟದ ಬುಡಕ್ಕೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಪೋಲಂಪಲ್ಲಿ ರಸ್ತೆ ಬಳಿ 500 ಮೀಟರ್ಗಳ ರಸ್ತೆ ಕಲ್ಪಿಸಲು ಮನವಿ ಮಾಡಿದ್ದು, ಇದಕ್ಕೆ ಸ್ಪಂ ದಿಸಿದ ಸಚಿವರು, ಈ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ತ್ವರಿತ ಗತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕವಾಗುವಂತೆ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿ ಕಾರಿಗಳಿಗೆ ಸೂಚಿಸಿ, ರಸ್ತೆ ಮಾಡಿಸಿಕೊಡುತ್ತೇನೆ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀವರಾಹಗಿರಿ ಎಂಬ ಕಿರುಹೊತ್ತಿಗೆ ಪುಸ್ತಕವನ್ನು ಸಚಿವ ಕೆ.ಸುಧಾಕರ್, ಶಾಸಕ ಎಸ್.ಎನ್.ಸುಬ್ಟಾರೆಡ್ಡಿ, ಟ್ರಸ್ಟ್ನ ಅಧ್ಯಕ್ಷ ಹಾಗೂ ಎಲ್ಲಾ ಸದಸ್ಯರು ಬಿಡುಗಡೆ ಮಾಡಿದರು. ನಂತರ ಸಚಿವರಿಗೆ ಮತ್ತು ಶಾಸಕರಿಗೆ ಬೆಟ್ಟದ ಅಭಿವೃದ್ಧಿಗಾಗಿ ಟ್ರಸ್ಟ್ನ ಆಡಳಿತ ಮಂಡಳಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್ ಸಿಗ್ಬತುಲ್ಲಾ, ಟ್ರಸ್ಟ್ನ ಅಧ್ಯಕ್ಷ ಎ.ಶಿವರಾಂ, ಕಾರ್ಯದರ್ಶಿ ಶ್ರೀನಿವಾಸಾಚಾರಿ, ಉಪಾಧ್ಯಕ್ಷ ಎಲ್.ಎ.ಬಾಬು, ಗ್ರಾಪಂ ಅಧ್ಯಕ್ಷೆ ಅನಂದಮ್ಮ ಮುಂತಾದವರು ಉಪಸ್ಥಿತರಿದ್ದರು.