Advertisement

Loksabha ; ಪುತ್ರ ವಿರುದ್ಧ ಪ್ರಚಾರಕ್ಕೂ ಸಿದ್ಧ: ಕಾಂಗ್ರೆಸ್‌ ನಾಯಕ ಎ.ಕೆ.ಆ್ಯಂಟನಿ ಘೋಷಣೆ

11:55 PM Mar 26, 2024 | Team Udayavani |

ತಿರುವನಂತಪುರ: ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಪುತ್ರ ಅನಿಲ್‌ ಆ್ಯಂಟನಿ ವಿರುದ್ಧ ಪ್ರಚಾರಕ್ಕೆ ಸಿದ್ಧವಿರುವುದಾಗಿ ಕಾಂಗ್ರೆಸ್‌ ಹಿರಿಯ ನಾಯಕ ಎ.ಕೆ.ಆ್ಯಂಟನಿ ಹೇಳಿದ್ದಾರೆ.

Advertisement

“ಮುಂಬರುವ ಚುನಾವಣೆಯು “ಮಾಡು ಇಲ್ಲವೇ ಮಡಿ’ ಹೋರಾಟವಾಗಿದ್ದು, ಭಾರತ ಎಂಬ ಪರಿಕಲ್ಪನೆ ಉಳಿಯಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಿದೆ. ಹಾಗಾಗಿ ನಾನು ಇಳಿ ವಯಸ್ಸಲ್ಲೂ ಶಕ್ತಿ ಮೀರಿ ಹೋರಾಟ ಮಾಡಲಿದ್ದು, ನನ್ನ ಆರೋಗ್ಯ ಪರಿಸ್ಥಿತಿ ಸಹಕರಿಸಿದರೆ ಕೇರಳದಲ್ಲಿ ಯುಡಿಎಫ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದೇನೆ. ಇದು ಪುತ್ರ ಅನಿಲ್‌ ಸ್ಪರ್ಧಿಸುತ್ತಿರುವ ಪತ್ತನಂತಿಟ್ಟ ಕ್ಷೇತ್ರಕ್ಕೂ ಅನ್ವಯಿಸಲಿದೆ’ ಎಂದಿದ್ದಾರೆ.

ಭಾರತದ ದೀರ್ಘ‌ಕಾಲದ ರಕ್ಷಣ ಸಚಿವರೂ ಆಗಿರುವ ಕೇರಳ ಮಾಜಿ ಮುಖ್ಯಮಂತ್ರಿ ಎ.ಕೆ.ಆ್ಯಂಟನಿ ಪುತ್ರ ಅನಿಲ್‌ ಕೆ.ಆ್ಯಂಟನಿ ಕಳೆದ ವರ್ಷ ಬಿಜೆಪಿ ಸೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next