Advertisement
ನೀರಿನೊಂದಿಗೆ ಬೆರೆತು, ಜಮೀನಿನ ಮೇಲೆ ಹರಡಿ ಭೂಮಿ ಬರಡಾಗುತ್ತಿದೆ. ಸಾರ್ವಜನಿಕರ ಆಗ್ರಹದ ಫಲವಾಗಿ ಗ್ರಾ.ಪಂ. ಘಟಕಕ್ಕೆ ಹಿಂದೆ ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು ಹಿಂತೆಗೆದುಕೊಂಡಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಂಗೆ ಪತ್ರ ಬರೆದಿದೆ. ಜನರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಲ್ಲದೆ ಎರಡು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಯಾವುದೂ ಫಲ ನೀಡಿಲ್ಲ ಎಂದು ನಿಯೋಗದ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ದೂರು ಸ್ವೀಕರಿಸಿದ ಅವರು ಅಧಿಕಾರಿಗಳ ಮೂಲಕ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎಂದು ನಿಯೋಗದ ಜತೆ ತೆರಳಿದ್ದ ಅಶೋಕಕುಮಾರ ಶೆಟ್ಟಿ ಮತ್ತು ನಾಗೇಂದ್ರ ದೇವಾಡಿಗ ತಿಳಿಸಿದ್ದಾರೆ.
Advertisement
ಜಲ್ಲಿ ಮಿಶ್ರಣ ಘಟಕ: ಜಿಲ್ಲಾಧಿಕಾರಿಗಳಿಗೆ ದೂರು
01:25 AM Dec 19, 2018 | Karthik A |
Advertisement
Udayavani is now on Telegram. Click here to join our channel and stay updated with the latest news.