Advertisement

ಮತ್ತೆ ಓಡಾಟಕ್ಕೆ ಸಿದ್ಧವಾದ “ನಗುಮಗು’

10:48 PM Dec 20, 2019 | mahesh |

ಮಹಾನಗರ: ಡೀಸೆಲ್‌ ಇಲ್ಲದ ಕಾರಣ ಸೇವೆ ಸ್ಥಗಿತಗೊಳಿಸಿದ “ನಗುಮಗು’ ಆ್ಯಂಬುಲೆನ್ಸ್‌ಗೆ ಡೀಸೆಲ್‌ ಹಾಕಲು ಹಣ ಲಭಿಸಿರುವುದರಿಂದ ಪುನಃ ಸೇವೆ ಆರಂಭಿಸಲು ಸಿದ್ಧಗೊಂಡಿದೆ. ಕರ್ಫ್ಯೂ ಮುಗಿದ ಬಳಿಕ ಆ್ಯಂಬುಲೆನ್ಸ್‌ ಸೇವೆ ಆರಂಭಿಸಲಿದೆ.

Advertisement

ಗರ್ಭಿಣಿಯರಿಗೆ ಮತ್ತು ರೋಗಗ್ರಸ್ತ ಶಿಶುಗಳ ಸೇವೆಗಾಗಿ ಸರಕಾರದ ವತಿಯಿಂದ ಜಿಲ್ಲಾ ಲೇಡಿಗೋಷನ್‌ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ “ನಗುಮಗು’ ಆ್ಯಂಬುಲೆನ್ಸ್‌ ಓಡಾಟ ನಡೆಸುತ್ತಿದೆ. ಪೆಟ್ರೋಲ್‌ ಬಂಕ್‌ನವರಿಗೆ 60 ಸಾವಿರ ರೂ. ಸಾಲ ಪಾವತಿ ಬಾಕಿ ಇರುವುದರಿಂದ ಮತ್ತು ಈ ಸಾಲ ಮರುಪಾವತಿಸಲು ಸರಕಾರ ಅನುದಾನ ನೀಡದಿರುವುದರಿಂದ ಈ ಆ್ಯಂಬುಲೆನ್ಸ್‌ ಕಳೆದ ಒಂದು ತಿಂಗಳಿನಿಂದ ಸೇವೆ ಸ್ಥಗಿತಗೊಳಿಸಿ ಶೆಡ್‌ನ‌ಲ್ಲಿ ನಿಲುಗಡೆಗೊಂಡಿತ್ತು.

ಈಗ ಸರಕಾರದಿಂದ ಆ್ಯಂಬುಲೆನ್ಸ್‌ ಓಡಾಟಕ್ಕೆ ಹಣ ಬಿಡುಗಡೆಯಾಗದಿದ್ದರೂ, ಜನನಿ ಸುರಕ್ಷಾ ಯೋಜನೆಯ ಮುಖಾಂತರ ಸುಮಾರು ಅರ್ಧದಷ್ಟು ಹಣವನ್ನು ಪರ್ಯಾಯವಾಗಿ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್‌ ಮತ್ತೆ ಓಡಾಟಕ್ಕೆ ಅನುವಾಗಿದೆ. ಕರ್ಫ್ಯೂ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಂಕ್‌ಗಳು ಬಂದ್‌ ಆಗಿರುವುದರಿಂದ ಡೀಸೆಲ್‌ ಹಾಕಲಾಗದೆ, ತತ್‌ಕ್ಷಣವೇ ಆ್ಯಂಬುಲೆನ್ಸ್‌ ಓಡಾಟ ಸಾಧ್ಯವಾಗುತ್ತಿಲ್ಲ. ಕರ್ಫ್ಯೂ ಮುಗಿದ ತತ್‌ಕ್ಷಣ ಮತ್ತೆ ಈ ಆ್ಯಂಬುಲೆನ್ಸ್‌ ಓಡಾಟ ನಡೆಸಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಸವಿತಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next